ತಾಲ್ಲೂಕಿನ ಶಿರಗಾನಹಳ್ಳಿಯ ಮತಗಟ್ಟೆ ಎದುರು ನಿಂಬೆಹಣ್ಣು, ಅಕ್ಕಿ, ಕುಂಕುಮವಿಟ್ಟು ವಾಮಾಚಾರ ಮಾಡಿ, ಮತಗಟ್ಟೆ ಸುತ್ತಲೂ ನಿಂಬೆಹಣ್ಣು ಎಸೆಯಲಾಗಿತ್ತು. ಯಡಿಹಳ್ಳಿ ಗ್ರಾಮ ಪಂಚಾಯಿತಿಯ ಬಿಕ್ಕಿಕಟ್ಟೆ ಗ್ರಾಮದ ಮತಗಟ್ಟೆ ಬಳಿ ಕೋಳಿ, ಪಾರಿವಾಳದ ಕುತ್ತಿಗೆ ಕೊಯ್ದು, ನಿಂಬೆಹಣ್ಣು, ಕುಂಕುಮ ಲೇಪಿಸಿ ವಾಮಾಚಾರ ಮಾಡಿದ್ದಾರೆ. ಇದರಿಂದ ಎರಡು ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣ ಆಗಿತ್ತು.