ಸಂಸದರು, ಶಾಸಕರು, ಹಿಂದು ಮಹಾಸಭಾದ ಪ್ರಮುಖರು ಸೇರಿ ಇನ್ನಿತರ ಗಣ್ಯರು ವಿಸರ್ಜನಾ ಮೆರವಣಿಗೆ ಆರಂಭಿಸುವ ವೇಳೆ ಉಪಸ್ಥಿತರಿದ್ದರು. ಹೈಸ್ಕೂಲ್ ಮೈದಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆ ಆರಂಭಗೊಂಡಿತು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಬಾತಿಕೆರೆ ವರೆಗೆ ಶೋಭಾಯಾತ್ರೆ ನಡೆಯಿತು. ಅಲ್ಲಿ ವಿಗ್ರಹ ವಿಸರ್ಜನೆ ಮಾಡಲಾಯಿತು.