ತರಬೇತುದಾರ ಶಿವಾನಂದ್, ‘ಅರ್ಜುನ್ ಹಲ್ಲುಕುರ್ಕಿ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ, ಕಾಮನ್ವೆಲ್ತ್ನಲ್ಲಿ ರಫೀಕ್ ಹೋಳಿ ಬೆಳ್ಳಿ ಪದಕ ಪಡೆದಿರುವುದು ತರಬೇತುದಾರನಾಗಿ ನನಗೆ ಖುಷಿಯ ವಿಚಾರ. ಅವರಿಬ್ಬರಿಗೆ ಏಕಲವ್ಯ ಪ್ರಶಸ್ತಿ, ನನಗೆ ಜೀವಮಾನದ ಪ್ರಶಸ್ತಿ, ಆನಂದ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಬಂದಿರುವುದು ದಾವಣಗೆರೆ ಜಿಲ್ಲೆಗೆ ಹೆಮ್ಮೆಯ ವಿಚಾರ. ಅರ್ಜುನ್ ಮತ್ತು ರಫೀಕ್ ಮುಂದಿನ ಒಲಿಂಪಿಕ್ಸ್ನಲ್ಲಿ ಖಂಡಿತ ಪದಕ ಪಡೆದು ದೇಶಕ್ಕೆ ಹೆಮ್ಮೆ ತರಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.