ಹರಪನಹಳ್ಳಿ: ತಾಲ್ಲೂಕಿನ ಉಪಕಾರಾಗೃಹ ಸಮೀಪ ಅಪಘಾತವಾಗಿದ್ದು, ನರಳುತ್ತಿದ್ದ ಗಾಯಾಳು ಯುವಕನನ್ನು ಕಂಭಟ್ರಹಳ್ಳಿಯ ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ದಾವಣಗೆರೆ ನಿವಾಸಿ ಶ್ರೀನಿವಾಸ್ ಬಳ್ಳಾರಿ ಗಾಯಗೊಂಡಿದ್ದ ಯುವಕ. ಶುಕ್ರವಾರ ಸಂಜೆ ಬೈಕ್ ಮತ್ತು ಕಾರು ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಶ್ರೀನಿವಾಸ ತಲೆಗೆ ಪೆಟ್ಟುಬಿದ್ದು ನರಳಾಡುತ್ತಿದ್ದ. ಅಂಬುಲೆನ್ಸ್ಗೆ ಕರೆ ಮಾಡಿ ವಿಷಯ ತಿಳಿಸಿದರೂ ವಾಹನ ಬರುವುದು ತಡವಾಯಿತು.
ಗಾಯಾಳುವನ್ನು ನೋಡಿದ ಗ್ರಾಮಸ್ಥರು ತಕ್ಷಣವೇ ಗೂಡ್ಸ್ ಆಟೊದಲ್ಲಿ ಕರೆದುಕೊಂಡು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಶ್ರೀನಿವಾಸ, ಮಲ್ಲನಗೌಡ ಇದ್ದರು.