‘ಒಬ್ಬ ಮಗ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗದ್ದಕ್ಕೆ ಬಹಳ ನೋವಾಯಿತು. ಕೃಷಿಗೆ ಕೈ ಹಾಕಿದ ನಂತರ ಆರ್ಥಿಕ ಸ್ಥಿತಿಯಲ್ಲಿ ಕೊಂಚ ಚೇತರಿಕೆ ಕಂಡುಬಂದಿತು. ನನ್ನ ಮಗನಂತೆ ಬೇರೆಯವರ ಮಕ್ಕಳು ಆರ್ಥಿಕ ಪರಿಸ್ಥಿತಿ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಪ್ರತಿವರ್ಷ ಆಗಸ್ಟ್ 15ರಂದು 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪೆನ್ನು, ಪೆನ್ಸಿಲ್, ಮೆಂಡರ್, ಇಂಗ್ಲಿಷ್ ನಿಘಂಟು ಪುಸ್ತಕ, ಸ್ಕೇಲ್ ನೀಡುತ್ತಾ ಬಂದಿದ್ದೇನೆ. ಈ ವರ್ಷ 105 ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿ ನೀಡಿದ್ದೇನೆ. ಕಡುಬಡತನದ ಕೆಲ ವಿದ್ಯಾರ್ಥಿಗಳಿಗೆ ಕೆಲಮೊಮ್ಮೆ ಶುಲ್ಕವನ್ನೂ ಪಾವತಿಸಿರುವೆ’ ಎನ್ನುತ್ತಾರೆ
ಭರ್ಮಗೌಡ.