<p><strong>ಜಗಳೂರು:</strong> ಆಧುನಿಕ ಸಮಾಜದಲ್ಲಿ ವಿದ್ಯೆ,ಸಂಪತ್ತು,ಅಧಿಕಾರ ಸೇರಿದಂತೆ ಸಕಲ ಸವಲತ್ತುಗಳಿದ್ದರೂ ಸುಖ,ನೆಮ್ಮದಿ,ಶಾಂತಿ,ಆರೋಗ್ಯಗಳು ಮರೀಚಿಕೆಯಾಗುತ್ತಿದೆ ಎಂದು ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>ಪಟ್ಟಣದ ದಾವಣಗೆರೆ ಮುಖ್ಯ ರಸ್ತೆಯ ನಾಗರಕಟ್ಟೆ ಬಳಿ ಬುಧವಾರ ಶ್ರೀ ನಾಗದೇವ, ವಿಘ್ನೇಶ್ವರ,ಶಿವ ಪಾರ್ವತಿ ದೇವರುಗಳ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು.</p>.<p>ಪ್ರಕೃತಿಯಲ್ಲಿ ಪಂಚತತ್ವಗಳು ಸಾರ್ವಕಾಲಿಕವಾಗಿ ಏಕಸ್ವರೂಪವಾಗಿವೆ. ಮನುಷ್ಯನ ಜೀವನ ಶೈಲಿ ಬದಲಾವಣೆಯಾಗಿದೆ. ಸಂಸ್ಕಾರಯುತ ಬದುಕು ರೂಪಿಸಿಕೊಳ್ಳಬೇಕಿದೆ. ವಿದ್ಯಾವಂತರು ಸಂಸ್ಕಾರ ಮರೆಯುತ್ತಿದ್ದಾರೆ. ಮನುಷ್ಯನಿಗೆ ಪುಣ್ಯ ಮತ್ತು ಧರ್ಮ ಕಾರ್ಯಗಳಿಂದ ಮಾತ್ರ ಸುಖ,ನೆಮ್ಮದಿ ಸಿಗುತ್ತದೆ. ಜಗತ್ತಿನಲ್ಲಿ ನಂಬಿಕೆ,ವಿಶ್ವಾಸಗಳನ್ನು ಉಳಿಸಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.</p>.<p>ಕೇದಾರ ಪೀಠದ ಉತ್ತರಾಧಿಕಾರಿಯಾಗಿ ಆಯ್ಕೆಯಾದ ನಂತರ ಪ್ರಥಮ ಪ್ರವೇಶ ಇದಾಗಿದ್ದು ಅತ್ಯಂತ ಸಂತಸ ತಂದಿದೆ. ತಾಲ್ಲೂಕಿನಲ್ಲಿ ಗವಿಮಠದ ಪರಂಪರೆಯನ್ನು ಮುಂದುವರೆಸುತ್ತಿರುವ ಭಕ್ತಸಮೂಹಕ್ಕೆ ಚಿರ ಋಣಿಯಾಗಿರುವೆ. ಇಲ್ಲಿನ ಅರಳಿಕಟ್ಟೆಯಲ್ಲಿ ನಾಗದೇವತೆ,ಶಿವಪಾರ್ವತಿ,ದೇವರುಗಳ ಪ್ರತಿಷ್ಠಾಪನೆಯ ಧಾರ್ಮಿಕ ಸತ್ಕಾರ್ಯಗಳು ಸ್ವಾಗತರ್ಹ ಎಂದು ಸ್ವಾಮೀಜಿ ಹೇಳಿದರು.</p>.<p>ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್, ಆಧುನಿಕ ಬದುಕಿನ ಒತ್ತಡಗಳಲ್ಲಿ ಮನುಷ್ಯನಿಗೆ ನೆಮ್ಮದಿಯಿಲ್ಲದಂತಾಗಿದೆ. ಜನತೆ ಸ್ವಾರ್ಥ ಬದುಕು, ಸಂಸಾರ, ಹಣ ಗಳಿಕೆ, ಅಧಿಕಾರ ಲಾಲಸೆಗಳಲ್ಲಿ ಮುಳುಗಿ ಹೋಗಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳು ಸಾಮರಸ್ಯತೆಯ ಸೆಲೆಗಳಾಗಿವೆ ಎಂದು ಹೇಳಿದರು.</p>.<p>ನಾಗರಕಟ್ಟೆ ಸೇವಾ ಸಮಿತಿಯ ಅಧ್ಯಕ್ಷ ಚನ್ನಪ್ಪ, ಕಾರ್ಯದರ್ಶಿ ಗಣೇಶ್, ಕುಮಾರಗೌಡ್ರು, ಮಂಜುನಾಥ್, ಮನೋಹರ್ ರೆಡ್ಡಿ,ನಾಗರಾಜ್, ಗೌರಿಪುರ ಶಿವಣ್ಣ, ವಿಠ್ಠಲ್ ಶ್ರೇಷ್ಠಿ, ಪ.ಪಂ ಮಾಜಿ ಸದಸ್ಯೆ ಲಲಿತಮ್ಮಶಿವಣ್ಣ, ಬಂಗಾರಪ್ಪ, ವೆಂಕಟೇಶ್ ಮೂರ್ತಿ, ಪಂಕಜ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಗಳೂರು:</strong> ಆಧುನಿಕ ಸಮಾಜದಲ್ಲಿ ವಿದ್ಯೆ,ಸಂಪತ್ತು,ಅಧಿಕಾರ ಸೇರಿದಂತೆ ಸಕಲ ಸವಲತ್ತುಗಳಿದ್ದರೂ ಸುಖ,ನೆಮ್ಮದಿ,ಶಾಂತಿ,ಆರೋಗ್ಯಗಳು ಮರೀಚಿಕೆಯಾಗುತ್ತಿದೆ ಎಂದು ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>ಪಟ್ಟಣದ ದಾವಣಗೆರೆ ಮುಖ್ಯ ರಸ್ತೆಯ ನಾಗರಕಟ್ಟೆ ಬಳಿ ಬುಧವಾರ ಶ್ರೀ ನಾಗದೇವ, ವಿಘ್ನೇಶ್ವರ,ಶಿವ ಪಾರ್ವತಿ ದೇವರುಗಳ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಅವರು ಮಾತನಾಡಿದರು.</p>.<p>ಪ್ರಕೃತಿಯಲ್ಲಿ ಪಂಚತತ್ವಗಳು ಸಾರ್ವಕಾಲಿಕವಾಗಿ ಏಕಸ್ವರೂಪವಾಗಿವೆ. ಮನುಷ್ಯನ ಜೀವನ ಶೈಲಿ ಬದಲಾವಣೆಯಾಗಿದೆ. ಸಂಸ್ಕಾರಯುತ ಬದುಕು ರೂಪಿಸಿಕೊಳ್ಳಬೇಕಿದೆ. ವಿದ್ಯಾವಂತರು ಸಂಸ್ಕಾರ ಮರೆಯುತ್ತಿದ್ದಾರೆ. ಮನುಷ್ಯನಿಗೆ ಪುಣ್ಯ ಮತ್ತು ಧರ್ಮ ಕಾರ್ಯಗಳಿಂದ ಮಾತ್ರ ಸುಖ,ನೆಮ್ಮದಿ ಸಿಗುತ್ತದೆ. ಜಗತ್ತಿನಲ್ಲಿ ನಂಬಿಕೆ,ವಿಶ್ವಾಸಗಳನ್ನು ಉಳಿಸಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.</p>.<p>ಕೇದಾರ ಪೀಠದ ಉತ್ತರಾಧಿಕಾರಿಯಾಗಿ ಆಯ್ಕೆಯಾದ ನಂತರ ಪ್ರಥಮ ಪ್ರವೇಶ ಇದಾಗಿದ್ದು ಅತ್ಯಂತ ಸಂತಸ ತಂದಿದೆ. ತಾಲ್ಲೂಕಿನಲ್ಲಿ ಗವಿಮಠದ ಪರಂಪರೆಯನ್ನು ಮುಂದುವರೆಸುತ್ತಿರುವ ಭಕ್ತಸಮೂಹಕ್ಕೆ ಚಿರ ಋಣಿಯಾಗಿರುವೆ. ಇಲ್ಲಿನ ಅರಳಿಕಟ್ಟೆಯಲ್ಲಿ ನಾಗದೇವತೆ,ಶಿವಪಾರ್ವತಿ,ದೇವರುಗಳ ಪ್ರತಿಷ್ಠಾಪನೆಯ ಧಾರ್ಮಿಕ ಸತ್ಕಾರ್ಯಗಳು ಸ್ವಾಗತರ್ಹ ಎಂದು ಸ್ವಾಮೀಜಿ ಹೇಳಿದರು.</p>.<p>ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್, ಆಧುನಿಕ ಬದುಕಿನ ಒತ್ತಡಗಳಲ್ಲಿ ಮನುಷ್ಯನಿಗೆ ನೆಮ್ಮದಿಯಿಲ್ಲದಂತಾಗಿದೆ. ಜನತೆ ಸ್ವಾರ್ಥ ಬದುಕು, ಸಂಸಾರ, ಹಣ ಗಳಿಕೆ, ಅಧಿಕಾರ ಲಾಲಸೆಗಳಲ್ಲಿ ಮುಳುಗಿ ಹೋಗಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳು ಸಾಮರಸ್ಯತೆಯ ಸೆಲೆಗಳಾಗಿವೆ ಎಂದು ಹೇಳಿದರು.</p>.<p>ನಾಗರಕಟ್ಟೆ ಸೇವಾ ಸಮಿತಿಯ ಅಧ್ಯಕ್ಷ ಚನ್ನಪ್ಪ, ಕಾರ್ಯದರ್ಶಿ ಗಣೇಶ್, ಕುಮಾರಗೌಡ್ರು, ಮಂಜುನಾಥ್, ಮನೋಹರ್ ರೆಡ್ಡಿ,ನಾಗರಾಜ್, ಗೌರಿಪುರ ಶಿವಣ್ಣ, ವಿಠ್ಠಲ್ ಶ್ರೇಷ್ಠಿ, ಪ.ಪಂ ಮಾಜಿ ಸದಸ್ಯೆ ಲಲಿತಮ್ಮಶಿವಣ್ಣ, ಬಂಗಾರಪ್ಪ, ವೆಂಕಟೇಶ್ ಮೂರ್ತಿ, ಪಂಕಜ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>