ಅ.17ರಿಂದ ಬ್ಯಾಂಕಿನಲ್ಲಿಲೆಕ್ಕಪರಿಶೋಧನೆ ಕಾರ್ಯ ನಡೆಯುತ್ತಿತ್ತು. ಕೆಲಸದ ಒತ್ತಡದಿಂದಾಗಿ ಅನಿಲ್ ರಜೆಯಲ್ಲಿದ್ದರು.ಶನಿವಾರ ಬೆಳಿಗ್ಗೆ ಬ್ಯಾಂಕ್ ಬಾಗಿಲು ತೆರೆದು, ತಮ್ಮ ಕೊಠಡಿಯಲ್ಲಿ ಗ್ರಾಹಕರೊಂದಿಗೆ ಮಾತನಾಡುತ್ತಿದ್ದರು. ತುರ್ತಾಗಿ ಕೆಲಸವಿದೆ, ಮನೆಗೆ ಹೋಗಿ ಬರುವುದಾಗಿ ಗ್ರಾಹಕರಿಗೆ ಹೇಳಿದ್ದರು. ಮನೆಗೆ ಬಂದ ಅನಿಲ್ ಅವರು, ‘ಮಾರುಕಟ್ಟೆಗೆ ಒಳ್ಳೆಯ ತರಕಾರಿ ಬಂದಿದೆ. ತೆಗೆದುಕೊಂಡು ಬಾ’ ಎಂದು ಹೆಂಡತಿಯನ್ನು ಕಳುಹಿಸಿಕೊಟ್ಟಿದ್ದಾರೆ. ಹೆಂಡತಿ ವಾಪಸ್ಸಾಗುವುದರ ಒಳಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.