ದಾವಣಗೆರೆ ಜಿಲ್ಲೆಯಲ್ಲಿ 450ಕ್ಕೂ ಹೆಚ್ಚು ಕೆರೆಗಳಿದ್ದು, ಯಾವ ಕೆರೆಗಳೂ ಒತ್ತುವರಿಯಿಂದ ಮುಕ್ತವಾಗಿಲ್ಲ. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರವು ಕೆರೆಗಳ ಸುತ್ತಲಿನ 30 ಮೀ ಪ್ರದೇಶವನ್ನು ಬಫರ್ ಝೋನಾಗಿಸುವಂತೆ ಹೇಳಿದೆ. ಇದೂ ಸೇರಿದಂತೆ ಕೆರೆಗಳ ಸಂರಕ್ಷಣೆ ಕುರಿತ ಯಾವುದೇ ನಿಯಮಗಳು ಪಾಲನೆಯಾಗದಿರುವುದು ಮೇಲುನೋಟಕ್ಕೆ ಕಂಡುಬರುತ್ತದೆ. ಈ ಕುರಿತ ವರದಿ ಇಲ್ಲಿದೆ.