‘ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ. ಸೋತವರಿಗೆ ಕೀಳರಿಮೆ ಬೇಡ. ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು. ಭವಿಷ್ಯದಲ್ಲಿ ವಕೀಲರಾಗುವ ನೀವು ಜೀವನದುದ್ದಕ್ಕೂ ಸಮಚಿತ್ತದಿಂದ ಇರಬೇಕು. ಸೋಲು, ಗೆಲುವನ್ನು ಹೇಗೆ ಸ್ವೀಕರಿಸಬೇಕು ಎಂಬ ಪಾಠ ಕ್ರೀಡೆಗಳಿಂದ ದೊರೆಯುತ್ತದೆ. ನಿಮ್ಮ ವೃತ್ತಿಗೂ ಇದು ಪೂರಕವಾಗುತ್ತದೆ’ ಎಂದು ಆರ್.ಎಲ್. ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಸೋಮಶೇಖರಪ್ಪ ಸಲಹೆ ನೀಡಿದರು.