ಇಲ್ಲಿನ ನಿವಾಸಿಗಳಿಗೆ ಶೌಚಾಲಯದ ವ್ಯವಸ್ಥೆ ಇಲ್ಲ. ಸ್ವಚ್ಛತೆ ಹಾಗೂ ಸೂಕ್ತ ಸೌಲಭ್ಯಗಳಿಲ್ಲದೇ ಪರದಾಡುತ್ತಿದ್ದಾರೆ. ನಿವೇಶನ ಹಾಗೂ ಮನೆ ನಿರ್ಮಿಸಿಕೊಡುವಂತೆ ಶಾಸಕರಿಗೆ ಮನವಿ ಮಾಡಿದ್ದರೂ ಇನ್ನೂ ದೊರೆತಿಲ್ಲ
ಮನು ಕೆ.ಎಸ್. ಎ.ಕೆ. ಕಾಲೊನಿಯ ನಿವಾಸಿ
ಮಾಯಕೊಂಡದ ಎ.ಕೆ. ಕಾಲೊನಿ ಜನತೆ ಸಂಕಷ್ಟದಲ್ಲಿದ್ದರೆ. ಕಿರಿದಾದ ರಸ್ತೆಗಳಿದ್ದು ಚರಂಡಿಗಳ ಸ್ಥಿತಿ ಹೇಳತೀರದು. ನಿವಾಸಿಗಳಿಗೆ ಬದುಕು ಕಟ್ಟಿಕೊಳ್ಳಲು ಸರ್ಕಾರ ನೆರವಾಗಬೇಕು
ಎಂ.ಜಿ. ಗುರುನಾಥ್ ಗ್ರಾಮದ ಮುಖಂಡ
ನಿವೇಶನ ರಹಿತ ಪರಿಶಿಷ್ಟರಿಗೆ ನಿವೇಶನದ ಜೊತೆ ಲೋಕೋಪಯೋಗಿ ಇಲಾಖೆಯಿಂದ ವಸತಿ ನಿರ್ಮಿಸಿಕೊಡುವ ಯೋಜನೆಯ ಬಗ್ಗೆ ಚರ್ಚೆ ನಡೆದಿದ್ದು ಆದ್ಯತೆ ಮೇಲೆ ಮಾಡಿಕೊಡಲಾಗುವುದು