<p><strong>ಮಾಯಕೊಂಡ:</strong> ಗ್ರಾಮದಲ್ಲಿ ಭಾನುವಾರ ಹುಚ್ಚು ನಾಯಿ ಕಚ್ಚಿ ಹಸುವೊಂದು ಮೃತಪಟ್ಟಿದೆ.</p>.<p>ಗ್ರಾಮದ ಎಕೆ ಕಾಲೊನಿ ನಿವಾಸಿ ಕರಿಬಸಪ್ಪ ಭಾನುವಾರ ತಮ್ಮ ಮನೆಯ ಬಳಿ ಹಸುವನ್ನು ಕಟ್ಟಿಹಾಕಿದ್ದರು. ಈ ವೇಳೆ ಹುಚ್ಚು ನಾಯಿ ಕಚ್ಚಿ ಗಾಯಗೊಳಿಸಿತ್ತು. ಹಸುವಿಗೆ ಚಿಕಿತ್ಸೆ ಕೊಡಿಸಿದರೂ ಪ್ರಯೋಜನ ಆಗಲಿಲ್ಲ. ಅದೇ ದಿನ ಹುಚ್ಚು ನಾಯಿ ಗ್ರಾಮದ ಹಲವು ನಾಯಿಗಳಿಗೆ ಕಚ್ಚಿದೆ.</p>.<p>‘ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು, ಮಕ್ಕಳು ಭಯದಿಂದ ಓಡಾಡುವ ಸ್ಥಿತಿ ಇದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.</p>
<p><strong>ಮಾಯಕೊಂಡ:</strong> ಗ್ರಾಮದಲ್ಲಿ ಭಾನುವಾರ ಹುಚ್ಚು ನಾಯಿ ಕಚ್ಚಿ ಹಸುವೊಂದು ಮೃತಪಟ್ಟಿದೆ.</p>.<p>ಗ್ರಾಮದ ಎಕೆ ಕಾಲೊನಿ ನಿವಾಸಿ ಕರಿಬಸಪ್ಪ ಭಾನುವಾರ ತಮ್ಮ ಮನೆಯ ಬಳಿ ಹಸುವನ್ನು ಕಟ್ಟಿಹಾಕಿದ್ದರು. ಈ ವೇಳೆ ಹುಚ್ಚು ನಾಯಿ ಕಚ್ಚಿ ಗಾಯಗೊಳಿಸಿತ್ತು. ಹಸುವಿಗೆ ಚಿಕಿತ್ಸೆ ಕೊಡಿಸಿದರೂ ಪ್ರಯೋಜನ ಆಗಲಿಲ್ಲ. ಅದೇ ದಿನ ಹುಚ್ಚು ನಾಯಿ ಗ್ರಾಮದ ಹಲವು ನಾಯಿಗಳಿಗೆ ಕಚ್ಚಿದೆ.</p>.<p>‘ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು, ಮಕ್ಕಳು ಭಯದಿಂದ ಓಡಾಡುವ ಸ್ಥಿತಿ ಇದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.</p>