ದಾವಣಗೆರೆ: ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಗರ್ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯಿಂದ ಈಚೆಗೆ ಮಾಯಕೊಂಡದ ಬಗರ್ಹುಕುಂ ಸಾಗುವಳಿದಾರರಿಗೆ ಶಾಸಕ ಪ್ರೊ. ಲಿಂಗಣ್ಣ ಅಧ್ಯಕ್ಷತೆಯಲ್ಲಿ ಹಕ್ಕುಪತ್ರ ವಿತರಿಸಲಾಯಿತು.
ತಹಶೀಲ್ದಾರ್, ಸಮಿತಿಯ ಕಾರ್ಯದರ್ಶಿ ಬಿ.ಎನ್. ಗಿರೀಶ್, ಸದಸ್ಯರಾದ ಎ.ಇ. ನಾಗರಾಜ್, ಆರ್. ತಿಪ್ಪೇಶ್, ಟಿ. ಕವಿತಾ, ಸಮಿತಿಗೆ ಸಂಬಂಧಪಟ್ಟವರೊಂದಿಗೆ ಸಭೆ ನಡೆಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು.
ಸಭೆಯ ತೀರ್ಮಾನದಂತೆ ಶೇಖರಪ್ಪ, ಕೆಂಚವೀರಪ್ಪ, ದೇವೆಂದ್ರಪ್ಪ, ಶಿವಮೂರ್ತಿ, ಅಂಜಿನಪ್ಪ, ನಾಗಪ್ಪ ಅವರಿಗೆ ಹಕ್ಕುಪತ್ರ ನೀಡಲಾಯಿತು.