<p>ಸಾಸ್ವೆಹಳ್ಳಿ: ಗ್ರಾಮದ ಹೊರ ಹೊಲಯದ ಡಬಲ್ ಗೇಟ್ ಸುತ್ತಲಿನ ಪ್ರದೇಶದಲ್ಲಿ ಒಂಟಿಯಾಗಿ ಹೊಲ, ಗದ್ದೆಗಳಿಗೆ ಮತ್ತು ರಸ್ತೆಯಲ್ಲಿ ಓಡಾಡುತ್ತಿದ್ದ ಮನುಷ್ಯರ ಮೇಲೆ ದಾಳಿ ಮಾಡುತ್ತಿದ್ದ ಮುಷ್ಯ ಬುಧವಾರ ಬೆಳಿಗ್ಗೆ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ ಬಿದ್ದಿದೆ.</p>.<p>ಮುಷ್ಯದ ಹಾವಳಿಯ ಬಗ್ಗೆ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ತಿಂಗಳು ಗಟ್ಟಲೆ ಕಾರ್ಯಚರಣೆ ಮಾಡಿದರೂ ಇದು ಸೆರೆ ಸಿಕ್ಕಿರಲಿಲ್ಲ. ಊರಿಂದ ಊರಿಗೇ ಪ್ರಯಾಣ ಬೆಳೆಸಿದ್ದ ಈ ಮುಷ್ಯ ಅಕ್ಕ ಪಕ್ಕದ ಗ್ರಾಮಗಳಾದ ಸದಾಶಿವಪುರ, ಬೀರಗೊಂಡನಹಳ್ಳಿ, ಉಜ್ಜನೀಪುರ, ಹಿರೇಬಾಸೂರು, ಐನೂರು, ಮಲ್ಲಿಕಟ್ಟೆ ಗ್ರಾಮದ ಜನಗಳಿಗೂ ತೊಂದರೆ ಉಂಟು ಮಾಡಿತ್ತು.</p>.<p>ಇದರ ಉಪಟಳ ಹೆಚ್ಚಾದಾಗ ಜನ ಸ್ಥಳಿಯ ಗ್ರಾಮ ಪಂಚಾಯಿತಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು. ಗ್ರಾಮ ಪಂಚಾಯಿತಿ ಅರಣ್ಯ ಇಲಾಖೆ ಮತ್ತು ಸ್ಥಳಿಯ ರೈತರೊಂದಿಗೆ ಕೈ ಜೋಡಿಸಿ ಕಾರ್ಯಾಚರಣೆ ಮುಂದುವರಿಸಿತ್ತು.</p>.<p>ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಜೊಳಚಗುಡ್ಡದ ವೀರಯ್ಯ ಮೃತ್ಯುಂಜಯ ಸರಗಣಚಾರಿ ತಂಡವನ್ನು ಕರೆಸಲಾಗಿತ್ತು. ಅವರು ಮಂಗಳವಾರ ರಾತ್ರಿ ಗ್ರಾಮದ ಹೊರ ಹೊಲಯದ <br />ರೈತ ಹಿದಾಯಿತುಲ್ಲಾ ಅವರ ಜಮೀನಿನಲ್ಲಿ ಬೋನ್ ಇರಿಸಿದ್ದರು.</p>.<p>‘ಮೆಕ್ಕೆಜೋಳವು ಮುಷ್ಯಗಳಿಗೆ ಒಳ್ಳೆಯ ಆಹಾರವಾಗಿರುವುದರಿಂದ ಈ ಭಾಗದಲ್ಲಿ ಸುಮಾರು 15 ಮುಷ್ಯಗಳಿರಬಹುದು. ಇವುಗಳು ಒಂದಡೆಯಿಂದ ಇನ್ನೊಂದೆಡೆ <br />ಆಹಾರ ಹುಡುಕಿಕೊಂಡು ಬರುತ್ತವೆ. ಅವು ಸಾಮಾನ್ಯವಾಗಿ ಯಾರಿಗೂ ತೊಂದರೆ ಮಾಡುವುದಿಲ್ಲ. ಮನುಷ್ಯರಿಗೆ ಹೆದರಿ ದಾಳಿ ಮಾಡಿರುವ ಸಾಧ್ಯತೆ ಇದೆ. ಈ ಹಿಂದೆ ಭೈರನಹಳ್ಳಿಯಲ್ಲಿ, ದಾಗಿನಕಟ್ಟೆ, ಬನ್ನಿಕೋಡ್ ಅಲ್ಲಿರು ಮುಷ್ಯಗಳನ್ನು ಸೆರೆ ಹಿಡಿಯಲಾಗಿದೆ’ ಎಂದು ಅರಣ್ಯಾಧಿಕಾರಿ ಜಿತೇಂದ್ರ ತಿಳಿಸಿದರು.</p>.<p>ಮುಷ್ಯದ ಎರಡು ಗುಂಪು ಈ ಭಾಗದಲ್ಲಿವೆ. ಇದರಲ್ಲಿ ಮಾವಿನಕೋಟೆಯಲ್ಲಿ ವಾಸವಾಗಿರುವ ಐದು ಮುಷ್ಯಗಳ ಗುಂಪಿನಲ್ಲಿದ್ದ ಈ ಮುಷ್ಯವು ಮನುಷ್ಯರ ಮೇಲೆ ದಾಳಿ ಮಾಡುತ್ತಿತ್ತು. ಸೆರೆಸಿಕ್ಕಿರುವುದು ದಾಳಿ ಮಾಡುತ್ತಿದ್ದ ಮುಷ್ಯವೇ ಹೌದು ಎಂದು ಕಚ್ಚಿಸಿಕೊಂಡ ಸ್ಥಳೀಯರು ಗುರುತು ಹಿಡಿದರು. ಇದನ್ನು ವನ್ಯ ಜೀವಿ ವಲಯಕ್ಕೆ ಬಿಡಲಾಗುವುದು ಎಂದು ಉಪವಲಯ ಅರಣ್ಯಾಧಿಕಾರಿ ಮೈಲಾರಸ್ವಾಮಿ<br />ತಿಳಿಸಿದರು.</p>.<p>ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ರಮೇಶ್ನಾಡಿಗ್, ಸದಸ್ಯರಾದ ರೇಣುಕ ಕುಂಬಾರ್, ಶುಂಠಿ ಕರಿಬಸಪ್ಪ, ಪಿಡಿಒ ರಮೇಶ್ ಕೊಳ್ಳೂರ್, ಕಾರ್ಯದರ್ಶಿ ಫಾಲಾಕ್ಷಪ್ಪ, ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ನಾಗರಾಜ್, ಬೀಮಪ್ಪ, ಮಿರ್ಜಾ, ರೈತರಾದ ಹಿದಾಯಿತುಲ್ಲಾ, ಪಕಾಲಿ ಮಲ್ಲಿಕಾರ್ಜುನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಸ್ವೆಹಳ್ಳಿ: ಗ್ರಾಮದ ಹೊರ ಹೊಲಯದ ಡಬಲ್ ಗೇಟ್ ಸುತ್ತಲಿನ ಪ್ರದೇಶದಲ್ಲಿ ಒಂಟಿಯಾಗಿ ಹೊಲ, ಗದ್ದೆಗಳಿಗೆ ಮತ್ತು ರಸ್ತೆಯಲ್ಲಿ ಓಡಾಡುತ್ತಿದ್ದ ಮನುಷ್ಯರ ಮೇಲೆ ದಾಳಿ ಮಾಡುತ್ತಿದ್ದ ಮುಷ್ಯ ಬುಧವಾರ ಬೆಳಿಗ್ಗೆ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ ಬಿದ್ದಿದೆ.</p>.<p>ಮುಷ್ಯದ ಹಾವಳಿಯ ಬಗ್ಗೆ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ತಿಂಗಳು ಗಟ್ಟಲೆ ಕಾರ್ಯಚರಣೆ ಮಾಡಿದರೂ ಇದು ಸೆರೆ ಸಿಕ್ಕಿರಲಿಲ್ಲ. ಊರಿಂದ ಊರಿಗೇ ಪ್ರಯಾಣ ಬೆಳೆಸಿದ್ದ ಈ ಮುಷ್ಯ ಅಕ್ಕ ಪಕ್ಕದ ಗ್ರಾಮಗಳಾದ ಸದಾಶಿವಪುರ, ಬೀರಗೊಂಡನಹಳ್ಳಿ, ಉಜ್ಜನೀಪುರ, ಹಿರೇಬಾಸೂರು, ಐನೂರು, ಮಲ್ಲಿಕಟ್ಟೆ ಗ್ರಾಮದ ಜನಗಳಿಗೂ ತೊಂದರೆ ಉಂಟು ಮಾಡಿತ್ತು.</p>.<p>ಇದರ ಉಪಟಳ ಹೆಚ್ಚಾದಾಗ ಜನ ಸ್ಥಳಿಯ ಗ್ರಾಮ ಪಂಚಾಯಿತಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು. ಗ್ರಾಮ ಪಂಚಾಯಿತಿ ಅರಣ್ಯ ಇಲಾಖೆ ಮತ್ತು ಸ್ಥಳಿಯ ರೈತರೊಂದಿಗೆ ಕೈ ಜೋಡಿಸಿ ಕಾರ್ಯಾಚರಣೆ ಮುಂದುವರಿಸಿತ್ತು.</p>.<p>ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಜೊಳಚಗುಡ್ಡದ ವೀರಯ್ಯ ಮೃತ್ಯುಂಜಯ ಸರಗಣಚಾರಿ ತಂಡವನ್ನು ಕರೆಸಲಾಗಿತ್ತು. ಅವರು ಮಂಗಳವಾರ ರಾತ್ರಿ ಗ್ರಾಮದ ಹೊರ ಹೊಲಯದ <br />ರೈತ ಹಿದಾಯಿತುಲ್ಲಾ ಅವರ ಜಮೀನಿನಲ್ಲಿ ಬೋನ್ ಇರಿಸಿದ್ದರು.</p>.<p>‘ಮೆಕ್ಕೆಜೋಳವು ಮುಷ್ಯಗಳಿಗೆ ಒಳ್ಳೆಯ ಆಹಾರವಾಗಿರುವುದರಿಂದ ಈ ಭಾಗದಲ್ಲಿ ಸುಮಾರು 15 ಮುಷ್ಯಗಳಿರಬಹುದು. ಇವುಗಳು ಒಂದಡೆಯಿಂದ ಇನ್ನೊಂದೆಡೆ <br />ಆಹಾರ ಹುಡುಕಿಕೊಂಡು ಬರುತ್ತವೆ. ಅವು ಸಾಮಾನ್ಯವಾಗಿ ಯಾರಿಗೂ ತೊಂದರೆ ಮಾಡುವುದಿಲ್ಲ. ಮನುಷ್ಯರಿಗೆ ಹೆದರಿ ದಾಳಿ ಮಾಡಿರುವ ಸಾಧ್ಯತೆ ಇದೆ. ಈ ಹಿಂದೆ ಭೈರನಹಳ್ಳಿಯಲ್ಲಿ, ದಾಗಿನಕಟ್ಟೆ, ಬನ್ನಿಕೋಡ್ ಅಲ್ಲಿರು ಮುಷ್ಯಗಳನ್ನು ಸೆರೆ ಹಿಡಿಯಲಾಗಿದೆ’ ಎಂದು ಅರಣ್ಯಾಧಿಕಾರಿ ಜಿತೇಂದ್ರ ತಿಳಿಸಿದರು.</p>.<p>ಮುಷ್ಯದ ಎರಡು ಗುಂಪು ಈ ಭಾಗದಲ್ಲಿವೆ. ಇದರಲ್ಲಿ ಮಾವಿನಕೋಟೆಯಲ್ಲಿ ವಾಸವಾಗಿರುವ ಐದು ಮುಷ್ಯಗಳ ಗುಂಪಿನಲ್ಲಿದ್ದ ಈ ಮುಷ್ಯವು ಮನುಷ್ಯರ ಮೇಲೆ ದಾಳಿ ಮಾಡುತ್ತಿತ್ತು. ಸೆರೆಸಿಕ್ಕಿರುವುದು ದಾಳಿ ಮಾಡುತ್ತಿದ್ದ ಮುಷ್ಯವೇ ಹೌದು ಎಂದು ಕಚ್ಚಿಸಿಕೊಂಡ ಸ್ಥಳೀಯರು ಗುರುತು ಹಿಡಿದರು. ಇದನ್ನು ವನ್ಯ ಜೀವಿ ವಲಯಕ್ಕೆ ಬಿಡಲಾಗುವುದು ಎಂದು ಉಪವಲಯ ಅರಣ್ಯಾಧಿಕಾರಿ ಮೈಲಾರಸ್ವಾಮಿ<br />ತಿಳಿಸಿದರು.</p>.<p>ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ರಮೇಶ್ನಾಡಿಗ್, ಸದಸ್ಯರಾದ ರೇಣುಕ ಕುಂಬಾರ್, ಶುಂಠಿ ಕರಿಬಸಪ್ಪ, ಪಿಡಿಒ ರಮೇಶ್ ಕೊಳ್ಳೂರ್, ಕಾರ್ಯದರ್ಶಿ ಫಾಲಾಕ್ಷಪ್ಪ, ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ನಾಗರಾಜ್, ಬೀಮಪ್ಪ, ಮಿರ್ಜಾ, ರೈತರಾದ ಹಿದಾಯಿತುಲ್ಲಾ, ಪಕಾಲಿ ಮಲ್ಲಿಕಾರ್ಜುನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>