ಜಗಳೂರು ತಾಲ್ಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದ ವಾಸಿ ತಿಪ್ಪಮ್ಮ (45) ಹಾಗೂ ಅಜ್ಜಪ್ಪ (46) ಶಿಕ್ಷೆಗೆ ಗುರಿಯಾದವರು. ತಿಪ್ಪೇಸ್ವಾಮಿ ಕೊಲೆಯಾದವರು. ತಿಪ್ಪಮ್ಮ ಅಜ್ಜಪ್ಪನೊಂದಿಗೆ ಅನೈತಿಕ ಸಂಬಂಧದ ವಿಚಾರ ಇಬ್ಬರ ನಡುವೆ ಆಗಾಗ್ಗೆ ಜಗಳಕ್ಕೆ ಕಾರಣವಾಗಿತ್ತು. ಕೊಲೆ ಆರೋಪ ಸಾಬೀತಾದ ಕಾರಣ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೆ.ಬಿ. ಗೀತಾ ತಿಪ್ಪಮ್ಮಳಿಗೆ ಜೀವಾವಧಿ ಶಿಕ್ಷೆ ಹಾಗೂ ₹40 ಸಾವಿರ ದಂಡ, ಮತ್ತೊಬ್ಬ ಆರೋಪಿ ಅಜ್ಜಪ್ಪನಿಗೆ 5 ವರ್ಷಗಳ ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿದ್ದಾರೆ.