ಕೆಂಗಾಪುರ- ದೊಡ್ಡಘಟ್ಟ ಸಂಪರ್ಕ ಸೇತುವೆಯ ಮೂಲಕ ಪ್ರತಿ ದಿನ ನೂರಾರು ವಾಹನಗಳು ಸಂಚರಿಸುತ್ತವೆ. ಮಳೆಗಾಲದಲ್ಲಿ ಇಲ್ಲಿನ ಹಳ್ಳ ಮೈದುಂಬಿ ಹರಿದು ಸೇತುವೆಯ ಮೇಲೆ 5ರಿಂದ 6 ಅಡಿಗಳಷ್ಟು ನೀರು ಹರಿಯುತ್ತದೆ. ಪರಿಣಾಮವಾಗಿ ವಾಹನಗಳ ಸವಾರರು ತೊಂದರೆ ಅನುಭವಿಸುವಂತಾಗಿದೆ. ಸೇತುವೆಯ ಮೇಲೆ ವಾಹನಗಳು ಹೋಗುವಾಗ ದಾರಿ ಕಾಣದೆ ಅನೇಕ ವಾಹನಗಳು ಹಳ್ಳಕ್ಕೆ ಮುಗುಚಿಕೊಂಡಿರುವ ಘಟನೆಗಳು ನಡೆದಿವೆ. ಹಳ್ಳದ
ನೀರು ಭತ್ತದ ಗದ್ದೆಗಳಿಗೆ ನುಗ್ಗಿ, ನೂರಾರು ಎಕರೆ ಭತ್ತದ ಬೆಳೆ ಹಾನಿಗೋಡಾಗಿದೆ.