ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ
ಐರಣಿ ಗ್ರಾಮದವರಾದ ನಾಗಬಸಯ್ಯ ಮಳಲಿಮಠ ಅವರು ತಮ್ಮ ಬೈಕ್ಗೆ ಕನ್ನಡದ ಬಾವುಟಗಳನ್ನು ಕಟ್ಟಿಕೊಂಡು ರಾಜ್ಯದಾದ್ಯಂತ ಪ್ರಚಾರ
ಮಾಡುತ್ತಿದ್ದಾರೆ. ನಾಗಬಸಯ್ಯ ಅವರು ಬೆಂಗಳೂರಿನ ಎ.ಆರ್. ಕಲರ್ ಕ್ರಾಫ್ಟ್ ಕಂಪನಿಯಲ್ಲಿ
ಉದ್ಯೋಗಿಯಾಗಿದ್ದು, ಅವರ ಸತತ 6 ವರ್ಷಗಳ ಈ ಸುತ್ತಾಟಕ್ಕೆ ಕಂಪನಿ ಮಾಲೀಕರಾದ ರವಿಕುಮಾರ್ ಅವರೂ ಪೂರ್ಣ ಬೆಂಬಲ ನೀಡಿದ್ದಾರೆ. ಅಗತ್ಯ ಧನ ಸಹಾಯವನ್ನೂ ಒದಗಿಸುತ್ತಿದ್ದಾರೆ.