<p><strong>ಫಲವನಹಳ್ಳಿ(ನ್ಯಾಮತಿ):</strong> ಗ್ರಾಮದ ಸೇವಾಲಾಲ್ ದೇವಸ್ಥಾನದ ಎದುರು ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಎಂಟು ಜನರನ್ನು ಗುರುವಾರ ಪೊಲೀಸರು ಬಂಧಿಸಿ ಪ್ರಕರಣದ ದಾಖಲಿಸಿದ್ದಾರೆ.</p>.<p>ಗ್ರಾಮದ ಗಿರೀಶನಾಯ್ಕ, ಮಹೇಶ, ಉಮೇಶನಾಯ್ಕ, ಗಿರೀಶನಾಯ್ಕ, ಗಜೇಂದ್ರನಾಯ್ಕ, ಮಧುನಾಯ್ಕ, ಕಾಂತರಾಜ ಮತ್ತು ಕುಬೇರನಾಯ್ಕ ಅವರನ್ನು ಬಂಧಿಸಿ ಅವರು ಆಟಕ್ಕೆ ತೊಡಗಿಸಿದ್ದ ₹10,860 ನಗದು ವಶಪಡಿಸಿಕೊಳ್ಳಲಾಗಿದೆ.</p>.<p>ಪೊಲೀಸ್ ಇನ್ಸ್ಪೆಕ್ಟರ್ ಎನ್.ಎಸ್.ರವಿ ಮಾರ್ಗದರ್ಶನದಲ್ಲಿ ಸಬ್ಇನ್ಸ್ಪೆಕ್ಟರ್ ಬಿ.ಎಲ್.ಜಯಪ್ಪನಾಯ್ಕ ಮತ್ತು ಹೆಡ್ ಕಾನ್ಸ್ಟೆಬಲ್ ಕೆ.ಮಂಜಪ್ಪ ಆರೋಪಿಗಳನ್ನು ಬಂಧಿಸಿದ್ದಾರೆ.</p>.<p>ಮನೆ ಬೀಗ ಮುರಿದು ಕಳವು</p>.<p>ಗಂಜೀನಹಳ್ಳಿ (ನ್ಯಾಮತಿ): ಗ್ರಾಮದಲ್ಲಿ ಮನೆಯೊಂದರ ಬೀಗ ಮುರಿದು ನಗದು, ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ಗುರುವಾರ ನಡೆದಿದೆ.</p>.<p>ಗ್ರಾಮದ ಪರಸಪ್ಪ ಅವರು ತಾವು ಬಾಡಿಗೆ ಇದ್ದ ಮನೆಗೆ ರಾತ್ರಿ ಬೀಗ ಹಾಕಿ ಹೊಸದಾಗಿ ಕಟ್ಟುತ್ತಿರುವ ಮನೆಯಲ್ಲಿ ಮಲಗಲು ಕುಟುಂಬ ಸಮೇತ ಹೋಗಿದ್ದರು. ಬೆಳಿಗ್ಗೆ ಮನೆಗೆ ಬಂದು ನೋಡಿದಾಗ ಬಾಗಿಲು ಮುರಿದು ಒಳಹೊಕ್ಕ ಕಳ್ಳರು ₹40,000 ನಗದು ಹಾಗೂ ವಿವಿಧ ಬಂಗಾರದ ಒಡವೆಗಳು ಸೇರಿ ಒಟ್ಟು ಅಂದಾಜು ₹1.45 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ನ್ಯಾಮತಿ ಪೊಲೀಸರಿಗೆ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಫಲವನಹಳ್ಳಿ(ನ್ಯಾಮತಿ):</strong> ಗ್ರಾಮದ ಸೇವಾಲಾಲ್ ದೇವಸ್ಥಾನದ ಎದುರು ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಎಂಟು ಜನರನ್ನು ಗುರುವಾರ ಪೊಲೀಸರು ಬಂಧಿಸಿ ಪ್ರಕರಣದ ದಾಖಲಿಸಿದ್ದಾರೆ.</p>.<p>ಗ್ರಾಮದ ಗಿರೀಶನಾಯ್ಕ, ಮಹೇಶ, ಉಮೇಶನಾಯ್ಕ, ಗಿರೀಶನಾಯ್ಕ, ಗಜೇಂದ್ರನಾಯ್ಕ, ಮಧುನಾಯ್ಕ, ಕಾಂತರಾಜ ಮತ್ತು ಕುಬೇರನಾಯ್ಕ ಅವರನ್ನು ಬಂಧಿಸಿ ಅವರು ಆಟಕ್ಕೆ ತೊಡಗಿಸಿದ್ದ ₹10,860 ನಗದು ವಶಪಡಿಸಿಕೊಳ್ಳಲಾಗಿದೆ.</p>.<p>ಪೊಲೀಸ್ ಇನ್ಸ್ಪೆಕ್ಟರ್ ಎನ್.ಎಸ್.ರವಿ ಮಾರ್ಗದರ್ಶನದಲ್ಲಿ ಸಬ್ಇನ್ಸ್ಪೆಕ್ಟರ್ ಬಿ.ಎಲ್.ಜಯಪ್ಪನಾಯ್ಕ ಮತ್ತು ಹೆಡ್ ಕಾನ್ಸ್ಟೆಬಲ್ ಕೆ.ಮಂಜಪ್ಪ ಆರೋಪಿಗಳನ್ನು ಬಂಧಿಸಿದ್ದಾರೆ.</p>.<p>ಮನೆ ಬೀಗ ಮುರಿದು ಕಳವು</p>.<p>ಗಂಜೀನಹಳ್ಳಿ (ನ್ಯಾಮತಿ): ಗ್ರಾಮದಲ್ಲಿ ಮನೆಯೊಂದರ ಬೀಗ ಮುರಿದು ನಗದು, ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ಗುರುವಾರ ನಡೆದಿದೆ.</p>.<p>ಗ್ರಾಮದ ಪರಸಪ್ಪ ಅವರು ತಾವು ಬಾಡಿಗೆ ಇದ್ದ ಮನೆಗೆ ರಾತ್ರಿ ಬೀಗ ಹಾಕಿ ಹೊಸದಾಗಿ ಕಟ್ಟುತ್ತಿರುವ ಮನೆಯಲ್ಲಿ ಮಲಗಲು ಕುಟುಂಬ ಸಮೇತ ಹೋಗಿದ್ದರು. ಬೆಳಿಗ್ಗೆ ಮನೆಗೆ ಬಂದು ನೋಡಿದಾಗ ಬಾಗಿಲು ಮುರಿದು ಒಳಹೊಕ್ಕ ಕಳ್ಳರು ₹40,000 ನಗದು ಹಾಗೂ ವಿವಿಧ ಬಂಗಾರದ ಒಡವೆಗಳು ಸೇರಿ ಒಟ್ಟು ಅಂದಾಜು ₹1.45 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ನ್ಯಾಮತಿ ಪೊಲೀಸರಿಗೆ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>