ಇಲ್ಲಿನ ಸಿಹಿನೀರು ಕೆರೆಯೂ ಭರ್ತಿಯಾಗಿದ್ದು, ಕೋಡಿ ಬಿದ್ದಿದೆ. ಕೆರೆಯ ಅಚ್ಚುಕಟ್ಟು ಪ್ರದೇಶದ ತೋಟಗದ್ದೆಗಳಿಗೆ ಸಾಕಷ್ಟು ನೀರು ದೊರೆಯಲಿದ್ದು, ರೈತರು ಬೇಸಿಗೆ ಹಂಗಾಮಿನ ಬೆಳೆಗಳನ್ನು ಬೆಳೆಯುವ ಆಶಾವಾದ ಹೆಚ್ಚಿದೆ. ಈ ವರ್ಷದ ಮಳೆಗೆ ಸುತ್ತಲಿನ ಗ್ರಾಮಗಳ ಬಹುತೇಕ ಎಲ್ಲಾ ಕೆರೆಗಳೂ ತುಂಬಿವೆ. ದಾಗಿನಕಟ್ಟೆಯ ಇತಿಹಾಸ ಪ್ರಸಿದ್ಧ ನಾಗತಿಕೆರೆಯೂ ಭರ್ತಿಯಾಗಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ.