ದಾವಣಗೆರೆ: ಇಲ್ಲಿನ ಅಶೋಕ ಚಿತ್ರಮಂದಿರದ ಬಳಿಯ ರೈಲು ಹಳಿಯಲ್ಲಿ ಸಿಲುಕಿದ ಯುವಕನೊಬ್ಬನನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ವಿಡಿಯೊ ಹರಿದಾಡಿದೆ.
ಯುವಕ ನಡೆದು ಹೋಗುತ್ತಿರುವ ವೇಳೆ ರೈಲು ಬಂದಿದೆ. ಆತ ಕೆಳಗೆ ಬೀಳುತ್ತಿದ್ದಂತೆ ರಕ್ಷಣೆಗೆ ದೌಡಾಯಿಸಿದ ಸ್ಥಳಿಯರು ಯುವಕ ಕೆಳಗೆ ಬೀಳುವಷ್ಟರಲ್ಲಿ ಕರೆದು ತಂದು ಸ್ವಲ್ಪ ದೂರದಲ್ಲಿ ಬಿಟ್ಟರು.
ಯುವಕ ಆತ್ಮಹತ್ಯೆಗೆ ಯತ್ನಿಸಿದ್ದನಾ? ಇಲ್ಲವೇ ಮದ್ಯಪಾನ ಮಾಡಿ ಅಥವಾ ಅಚಾತುರ್ಯದಿಂದ ಬಿದ್ದನಾ ಎಂಬುದು ತನಿಖೆಯಿಂದ ತಿಳಿಯಬೇಕಿದೆ.
‘ಯುವಕ ರೈಲ್ವೆ ಹಳಿಯಲ್ಲಿ ನಡೆದು ಹೋಗುತ್ತಿದ್ದಾಗ ಸ್ಥಳೀಯರು ರಕ್ಷಿಸಿ ಆತನನ್ನು ಬೈಯ್ದು ಕಳುಹಿಸಿದ್ದಾರೆ. ಆತ ಆತ್ಮಹತ್ಯೆಗೆ ಯತ್ನಿಸಿಲ್ಲ. ಈ ಕುರಿತು ಯಾರೂ ದೂರು ನೀಡಿಲ್ಲ’ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.