ಮಲೇಬೆನ್ನೂರು ಪಟ್ಟಣದ ನಿವಾಸಿ ಮಕ್ರಿ ಚಮನ್ ಸಾಬ್ (45) ಕೊಲೆಯಾದವರು. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕು ಕೊಗನೊಳ್ಳಿ ಗ್ರಾಮದ ನಿವಾಸಿ ಅರ್ಜುನಪ್ಪ ಕೊಲೆಗೈದ ವ್ಯಕ್ತಿ. ಅರ್ಜುನಪ್ಪ ಕುರಿಗಳನ್ನು ಮೇಯಿಸಲು ಮಲೇಬೆನ್ನೂರಿಗೆ ಪ್ರತಿ ವರ್ಷ ಬರುತ್ತಿದ್ದರು. ಈ ಬಾರಿ ಮೂಗಿನಗೊಂದಿ ಬಳಿಯ ತೋಟದಲ್ಲಿ ಕುರಿಗಳನ್ನು ಬಿಟ್ಟಿದ್ದರು.