ಚನ್ನಗಿರಿ: ತಾಲ್ಲೂಕು ಗರಗ ಗ್ರಾಮದಲ್ಲಿ ತೋಟಕ್ಕೆ ಹೋದ ಸಮಯದಲ್ಲಿ ವಿಷಪೂರಿತ ಹಾವು ಕಚ್ಚಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಗ್ರಾಮದ ಹಾಲಪ್ಪ (44) ಮೃತ ವ್ಯಕ್ತಿ. ಅವರು ಗುರುವಾರ ಬೆಳಿಗ್ಗೆ ತಮ್ಮ ತೋಟಕ್ಕೆ ಹೋದ ಸಂದರ್ಭದಲ್ಲಿ ಹಾವು ಕಚ್ಚಿ ತೋಟದಲ್ಲಿಯೇ ಬಿದ್ದಿದ್ದರು. ಮನೆಯವರು ಹೋಗಿ ನೋಡಿದಾಗ ಬಾಯಿಯಲ್ಲಿ ನೊರೆ ಬಂದಿತ್ತು. ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.