‘ಮಠ, ಮಂದಿರಗಳಲ್ಲಿ ರಾಜಕಾರಣಿಗಳು, ಶ್ರೀಮಂತರಿಗೆ ಬೇಗನೆ ದರ್ಶನದ ಅವಕಾಶ ಸಿಗುತ್ತದೆ. ಬಡವರಿಗೆ ಸಿಗುವುದಿಲ್ಲ. ಈ ರೀತಿ ವ್ಯತ್ಯಾಸ ಏಕೆ’ ಎಂಬ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ‘ಮೊದಲು ದೇವಸ್ಥಾನಗಳಿಗೆ ಹೋಗುವ ಭ್ರಮೆಯಿಂದ ಹೊರಬನ್ನಿ. ತಾರತಮ್ಯ ಇರುವಲ್ಲಿಗೆ ನೀವು ಹೋಗದಿದ್ದರೆ ಅವರು ಅಂಗಡಿ ಬಂದ್ ಮಾಡಬೇಕಾಗುತ್ತದೆ. ಮಠಗಳಲ್ಲಿ ಕೂಡ ಇದೇ ತಾರತಮ್ಯ ಇದ್ದರೆ ಅಲ್ಲಿಗೂ ಹೋಗಬೇಡಿ. ಜನರೇ ಬರಲ್ಲ ಎಂದರೆ ಕೊನೆಗೆ ಅವರೇ ನಿಮ್ಮಲ್ಲಿಗೆ ಬರುವರು’ ಎಂದು ತಿಳಿಸಿದರು.