ಬಿಸಿಲು ಈ ಬಾರಿ ಜಿಲ್ಲೆಯಲ್ಲಿ 40 ಡಿಗ್ರಿ ಸೆಲ್ಸಿಯಸ್ವರೆಗೂ ತಲುಪಿದೆ. ಬೆಳಿಗ್ಗೆ 11ರ ನಂತರ ಮಧ್ಯಾಹ್ನ 3ರವರೆಗೆ ಹೊರಾಂಗಣದಲ್ಲಿ ಓಡಾಡುವುದನ್ನು ಆದಷ್ಟು ತಪ್ಪಿಸಬೇಕು. ಅನಿವಾರ್ಯ ಇದ್ದವರು ಕೊಡೆ, ಟೋಪಿ ಬಳಸಬೇಕು. ನೀರು, ಮಜ್ಜಿಗೆ, ಎಳನೀರು, ಹಣ್ಣು ಹೆಚ್ಚಾಗಿ ಸೇವಿಸಬೇಕು. ಮಸಾಲೆಯುಕ್ತ, ಮಾಂಸಾಹಾರ ಸೇವನೆ ಕಡಿಮೆ ಮಾಡಬೇಕು. ಸೊಪ್ಪು, ತರಕಾರಿ, ಹಣ್ಣು, ಹಂಪಲು ನಮ್ಮ ಊಟದ ಮೆನುವಿನಲ್ಲಿ ಇರಬೇಕು. ನಿರ್ಲಕ್ಷ್ಯ ಮಾಡಿದರೆ ಸನ್ಸ್ಟ್ರೋಕ್ ಆಗುವ ಅಪಾಯ ಇರುತ್ತದೆ ಎಂದು ಸಾರ್ವಜನಿಕ ಆಸ್ಪತ್ರೆ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಎಲ್. ಹನುಮನಾಯ್ಕ್ ತಿಳಿಸಿದರು.