ವಾರಕ್ಕೆ ಒಂದು ಸಭೆ ನಡೆಸಿದರೆ ಶಾಸಕರ ಬ್ಯಾಂಕಿನ ಖಾತೆಗೆ ಭತ್ಯೆ ಸೇರಿ ₹ 40 ಸಾವಿರ ಜಮಾ ಆಗುತ್ತದೆ. ಕೆಲವರು ಸಾಮರ್ಥ್ಯಕ್ಕೆ ಅನುಗುಣವಾಗಿ ವಾರಕ್ಕೆ ಎರಡು– ಮೂರು ಸಭೆಗಳನ್ನೂ ಮಾಡುತ್ತಾರೆ. ಶಾಸಕರು, ವಿಧಾನ ಪರಿಷತ್ ಸದಸ್ಯರು ತಮ್ಮ ಪಾಸ್ಬುಕ್ ಖಾತೆಗೆ ಹಣ ಜಮಾ ಆಗಿದೆಯೇ ಎಂಬುದನ್ನೂ ತೆಗೆದು ನೋಡುವುದಿಲ್ಲ. ಆದರೆ, ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡುವ ಶಿಕ್ಷಕರ ವೇತನ ಮಾತ್ರ ಪರಿಷ್ಕರಣೆ ಆಗುತ್ತಿಲ್ಲ. ಇದಕ್ಕೆ ರಾಜಕಾರಣಿಗಳು ಕಾರಣರಲ್ಲ; ಐ.ಎ.ಎಸ್ ಅಧಿಕಾರಿಗಳು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಭೋಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು.