ಹುಚ್ಚವ್ವನಹಳ್ಳಿ ವಡ್ಡರಹಟ್ಟಿಯ ರವಿಕುಮಾರ್ (35) ಮತ್ತು ರಮೇಶ್ (36) ಮೃತಟ್ಟವರು. ಇವರು ಹುಚ್ವವ್ಬನಹಳ್ಳಿಯ ಕೆರೆ ಬಳಿಯ ಅವರ ಜಮೀನಿಗೆ ಕಲ್ಲು ಆರಿಸಲು ಹೋಗಿದ್ದರು. ಸಂಜೆ ಇದ್ದಕ್ಕಿದ್ದಂತೆ ಗುಡುಗು, ಸಿಡಿಲಿನೊಂದಿಗೆ ಮಳೆ ಆರಂಭವಾಯಿತು. ಹತ್ತಿರದಲ್ಲಿದ್ದ ಮರದ ಕೆಳಗೆ ನಿಂತಿದ್ದ ಇವರಿಗೆ ಏಕಾಏಕಿ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.