<p><strong>ಹರಪನಹಳ್ಳಿ: </strong>ಸಾವಿರಾರು ಪಕ್ಷಿಗಳಿಗೆ ಆಶ್ರಯ, ಜನರಿಗೆ ನೆರಳು ಕೊಟ್ಟಿದ್ದ ಪಟ್ಟಣದ ಹೃದಯ ಭಾಗದಲ್ಲಿದ್ದ ಶತಮಾನದ ಅರಳಿಮರವೊಂದು ಮಳೆ, ಗಾಳಿಯಿಲ್ಲದಿದ್ದರೂ ಬುಡಸಮೇತ ಮೂರು ಭಾಗಗಳಾಗಿ ಧರೆಗುರುಳಿದೆ.</p>.<p>ಗೋಕರ್ಣೇಶ್ವರ ದೇವಸ್ಥಾನದ ಆವರಣವನ್ನೆಲ್ಲಾ ಆವರಿಸಿ ನೆರಳುಕೊಟ್ಟಿದ್ದ ಮರ, ಮೂರು ಬಲವಾದ ಬುಡಗಳಿಂದ ಬೇರೂರಿತ್ತು.</p>.<p>ಮರವು ಮೂರು ಭಾಗವಾಗಿ ನೆಲಕ್ಕಪ್ಪಳಿಸಿದೆ. ಮರದ ಸುತ್ತಲೂ ಕಟ್ಟಿದ್ದ ಕಟ್ಟೆಗೆ ಹಾನಿಯಾಗಿದೆ. ಈಶ್ವರ ದೇವಸ್ಥಾನಕ್ಕೆ ಯಾವುದೇ ಹಾನಿಯಾಗಿಲ್ಲ. ಯಾರ ಪ್ರಾಣಕ್ಕೂ ಅಪಾಯ ಉಂಟಾಗಿಲ್ಲ.</p>.<p>ಮರ ಬಿದ್ದಿರುವ ವಿಷಯ ಹರಡುತ್ತಿದ್ದಂತೆಯೇ ಸಾವಿರಾರು ಜನರು ತಂಡೋಪತಂಡವಾಗಿ ಆಗಮಿಸಿ ವೀಕ್ಷಿಸಿದರು. ಬಂದವರ ಪೈಕಿ ಕೆಲವರು ಯಾವುದೇ ಪ್ರಾಣಹಾನಿಯಾಗದೇ ಮರ ಬಿದ್ದಿದೆ ಅಂದರೆ ಇದು ಸ್ವಾಮಿಯ ಪವಾಡ ಎಂದೆಲ್ಲಾ ಮಾತನಾಡಿಕೊಳ್ಳುತ್ತಿದ್ದರು.</p>.<p>ಭಾನುವಾರ ಬೆಳಿಗ್ಗೆಯಿಂದಲೇ ಬುಡದಲ್ಲಿ ಶಬ್ದ ಬರುತ್ತಿತ್ತು. ಮಧ್ಯಾಹ್ನದ ವೇಳೆಗೆ ಮರ ಬಿದ್ದಿದೆ. ಆ ಸಂದರ್ಭದಲ್ಲಿ ಮರದ ಕೆಳಗಡೆ ಯಾರೂ ಕುಳಿತಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಪನಹಳ್ಳಿ: </strong>ಸಾವಿರಾರು ಪಕ್ಷಿಗಳಿಗೆ ಆಶ್ರಯ, ಜನರಿಗೆ ನೆರಳು ಕೊಟ್ಟಿದ್ದ ಪಟ್ಟಣದ ಹೃದಯ ಭಾಗದಲ್ಲಿದ್ದ ಶತಮಾನದ ಅರಳಿಮರವೊಂದು ಮಳೆ, ಗಾಳಿಯಿಲ್ಲದಿದ್ದರೂ ಬುಡಸಮೇತ ಮೂರು ಭಾಗಗಳಾಗಿ ಧರೆಗುರುಳಿದೆ.</p>.<p>ಗೋಕರ್ಣೇಶ್ವರ ದೇವಸ್ಥಾನದ ಆವರಣವನ್ನೆಲ್ಲಾ ಆವರಿಸಿ ನೆರಳುಕೊಟ್ಟಿದ್ದ ಮರ, ಮೂರು ಬಲವಾದ ಬುಡಗಳಿಂದ ಬೇರೂರಿತ್ತು.</p>.<p>ಮರವು ಮೂರು ಭಾಗವಾಗಿ ನೆಲಕ್ಕಪ್ಪಳಿಸಿದೆ. ಮರದ ಸುತ್ತಲೂ ಕಟ್ಟಿದ್ದ ಕಟ್ಟೆಗೆ ಹಾನಿಯಾಗಿದೆ. ಈಶ್ವರ ದೇವಸ್ಥಾನಕ್ಕೆ ಯಾವುದೇ ಹಾನಿಯಾಗಿಲ್ಲ. ಯಾರ ಪ್ರಾಣಕ್ಕೂ ಅಪಾಯ ಉಂಟಾಗಿಲ್ಲ.</p>.<p>ಮರ ಬಿದ್ದಿರುವ ವಿಷಯ ಹರಡುತ್ತಿದ್ದಂತೆಯೇ ಸಾವಿರಾರು ಜನರು ತಂಡೋಪತಂಡವಾಗಿ ಆಗಮಿಸಿ ವೀಕ್ಷಿಸಿದರು. ಬಂದವರ ಪೈಕಿ ಕೆಲವರು ಯಾವುದೇ ಪ್ರಾಣಹಾನಿಯಾಗದೇ ಮರ ಬಿದ್ದಿದೆ ಅಂದರೆ ಇದು ಸ್ವಾಮಿಯ ಪವಾಡ ಎಂದೆಲ್ಲಾ ಮಾತನಾಡಿಕೊಳ್ಳುತ್ತಿದ್ದರು.</p>.<p>ಭಾನುವಾರ ಬೆಳಿಗ್ಗೆಯಿಂದಲೇ ಬುಡದಲ್ಲಿ ಶಬ್ದ ಬರುತ್ತಿತ್ತು. ಮಧ್ಯಾಹ್ನದ ವೇಳೆಗೆ ಮರ ಬಿದ್ದಿದೆ. ಆ ಸಂದರ್ಭದಲ್ಲಿ ಮರದ ಕೆಳಗಡೆ ಯಾರೂ ಕುಳಿತಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>