ದಾವಣಗೆರೆಯಲ್ಲಿ ಎಐಡಿವೈಒನ ಪರಶುರಾಮ್, ಅನಿಲ್, ಮನು, ಗುರು, ಶಶಿಕುಮಾರ್, ಅಮಿತ್, ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಪೂಜಾ, ಕಾವ್ಯಾ, ಪುಷ್ಪ ಸೇರಿದಂತೆ ಎರಡೂ ಸಂಘಟನೆಗಳ ಜಿಲ್ಲಾ ಸಮಿತಿಯ ಸದಸ್ಯರು ಟ್ವೀಟ್ ಮಾಡುವ ಮೂಲಕ ಚಳವಳಿಯಲ್ಲಿ ಪಾಲ್ಗೊಂಡರು. ರಾಜ್ಯದಾದ್ಯಂತ 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಯುವಜನರು, ಜನಸಾಮಾನ್ಯರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ #SayNoMobileTarriffHike, #SayNoPrivatisation, #AIDSO_AIDYO, @TRAI @DoT_India ಎಂಬ ಹ್ಯಾಶ್ ಟ್ಯಾಗ್ಗಳನ್ನು ಬಳಸಿ ಟ್ವೀಟ್ ಹಾಗೂ ರೀ ಟ್ವೀಟ್ ಮಾಡುವ ಮೂಲಕ ಬೆಲೆ ಏರಿಕೆಯನ್ನು ವಿರೋಧಿಸಿದರು.