<p><strong>ತ್ಯಾವಣಿಗೆ:</strong> ಮನುಷ್ಯರು ಇನ್ನೊಬ್ಬರ ಮನಸ್ಸು ನೋಯಿಸಬಾರದು, ಭಾವನೆಗಳು ಶಿವಮಯವಾಗಿರಬೇಕು ಎಂದು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಹೇಳಿದರು.</p>.<p>ತ್ಯಾವಣಿಗೆ ಗ್ರಾಮದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿ.ವಿ. ವತಿಯಿಂದ ನಡೆದ ಶಿವರಾತ್ರಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಮನಷ್ಯರ ಮನಸ್ಸನ್ನು ಪರಿವರ್ತಿಸಲು ಹಬ್ಬಗಳು ಬರುತ್ತವೆ. ದುಶ್ಚಟಗಳು, ದುಷ್ಟಗುಣಗಳನ್ನು ಬಿಟ್ಟು ಸನ್ಮಾರ್ಗದಲ್ಲಿ ನಡೆಯಬೇಕಿದೆ. ನಡೆ ನುಡಿ ಎರಡೂ ಒಂದಾದಾಗ ಉತ್ತಮರಾಗಲು ಸಾಧ್ಯ ಎಂದು ತಿಳಿಸಿದರು.</p>.<p>‘ಸತ್ಯಶರಣರಿಗೆ ದಿನವೂ ಶಿವರಾತ್ರಿ. ದಿನವೂ ಶಿವನನ್ನು ಮನಸ್ಸಿನಲ್ಲಿ ನೆನೆಯಬೇಕು’ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿ.ವಿ.ಯ ದಾವಣಗೆರೆಯ ಸಂಚಾಲಕಿ ಲೀಲಾಜಿ ಹೇಳಿದರು.</p>.<p>ಕಾರ್ಯಕ್ರಮದಲ್ಲಿ ಹಿರಿಯರನ್ನು ಸನ್ಮಾನಿಸಲಾಯಿತು. ಮೌಂಟ್ ಅಬು ಪ್ರಧಾನ ಕೇಂದ್ರದ ಸವಿತಾ, ತ್ಯಾವಣಿಗೆ ಈಶ್ವರೀಯ ವಿ.ವಿ. ಸಂಚಾಲಕಿ ಬಿ.ಕೆ. ಲೋಲಾಕ್ಷಿ , ರುದ್ರೇಶ್, ದಿಗ್ಗಹಳ್ಳಿ ಬಸವರಾಜ್, ದಾದಾಪೀರ್ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತ್ಯಾವಣಿಗೆ:</strong> ಮನುಷ್ಯರು ಇನ್ನೊಬ್ಬರ ಮನಸ್ಸು ನೋಯಿಸಬಾರದು, ಭಾವನೆಗಳು ಶಿವಮಯವಾಗಿರಬೇಕು ಎಂದು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಹೇಳಿದರು.</p>.<p>ತ್ಯಾವಣಿಗೆ ಗ್ರಾಮದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿ.ವಿ. ವತಿಯಿಂದ ನಡೆದ ಶಿವರಾತ್ರಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಮನಷ್ಯರ ಮನಸ್ಸನ್ನು ಪರಿವರ್ತಿಸಲು ಹಬ್ಬಗಳು ಬರುತ್ತವೆ. ದುಶ್ಚಟಗಳು, ದುಷ್ಟಗುಣಗಳನ್ನು ಬಿಟ್ಟು ಸನ್ಮಾರ್ಗದಲ್ಲಿ ನಡೆಯಬೇಕಿದೆ. ನಡೆ ನುಡಿ ಎರಡೂ ಒಂದಾದಾಗ ಉತ್ತಮರಾಗಲು ಸಾಧ್ಯ ಎಂದು ತಿಳಿಸಿದರು.</p>.<p>‘ಸತ್ಯಶರಣರಿಗೆ ದಿನವೂ ಶಿವರಾತ್ರಿ. ದಿನವೂ ಶಿವನನ್ನು ಮನಸ್ಸಿನಲ್ಲಿ ನೆನೆಯಬೇಕು’ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿ.ವಿ.ಯ ದಾವಣಗೆರೆಯ ಸಂಚಾಲಕಿ ಲೀಲಾಜಿ ಹೇಳಿದರು.</p>.<p>ಕಾರ್ಯಕ್ರಮದಲ್ಲಿ ಹಿರಿಯರನ್ನು ಸನ್ಮಾನಿಸಲಾಯಿತು. ಮೌಂಟ್ ಅಬು ಪ್ರಧಾನ ಕೇಂದ್ರದ ಸವಿತಾ, ತ್ಯಾವಣಿಗೆ ಈಶ್ವರೀಯ ವಿ.ವಿ. ಸಂಚಾಲಕಿ ಬಿ.ಕೆ. ಲೋಲಾಕ್ಷಿ , ರುದ್ರೇಶ್, ದಿಗ್ಗಹಳ್ಳಿ ಬಸವರಾಜ್, ದಾದಾಪೀರ್ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>