ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆಯಲ್ಲಿ ಸಿಗದ ಐಸಿಯು: ಉಸಿರಾಟದ ಸಮಸ್ಯೆಯಿಂದ ಯುವಕ ಸಾವು

Last Updated 5 ಮೇ 2021, 3:49 IST
ಅಕ್ಷರ ಗಾತ್ರ

ದಾವಣಗೆರೆ: ಉಸಿರಾಟದ ಸಮಸ್ಯೆ ಇದ್ದ ಯುವಕ ಮಂಗಳವಾರ ಮೃತಪಟ್ಟಿದ್ದು, ಐಸಿಯು ಸಿಗದ ಕಾರಣ ಈ ಮರಣ ಉಂಟಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಹರಿಹರ ತಾಲ್ಲೂಕಿನ ಹನಗವಾಡಿಯ ಬಸವೇಶ್‌–ರತ್ನಮ್ಮ ದಂಪತಿಯ ಎರಡನೇ ಮಗ ಶಿವಶಂಕರ್‌ (28) ಮೃತಪಟ್ಟವರು. ಅವರಿಗೆ ವಾರದ ಹಿಂದೆ ಕೋವಿಡ್ ದೃಢಪಟ್ಟಿತ್ತು. ಬಳಿಕ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಜಿಲ್ಲಾ ಆಸ್ಪತ್ರೆಯ ಎಂಐಸಿಯುಗೆ ದಾಖಲಿಸಲಾಗಿತ್ತು. ಎಂಐಸಿಯು ಸಾಕಾಗಲ್ಲ, ಐಸಿಯು ಬೇಕಾಗುತ್ತದೆ. ಜಿಲ್ಲಾ ಆಸ್ಪತ್ರೆಯಲ್ಲಿ ಖಾಲಿ ಇಲ್ಲ. ಬೇರೆಡೆ ಇದೆಯೇ ಎಂದು ನೋಡುವಂತೆ ವೈದ್ಯರು ತಿಳಿಸಿದ್ದರು. ಆದರೆ ಎಲ್ಲಿಯೂ ಐಸಿಯು ಖಾಲಿ ಇಲ್ಲದೇ ಮೃತಪಟ್ಟಿದ್ದಾರೆ ಎಂದು ಶಿವಶಂಕರ್‌ ಅವರ ಸ್ನೇಹಿತ ಪ್ರವೀಣ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT