ಹರಿಹರ ತಾಲ್ಲೂಕಿನ ಹನಗವಾಡಿಯ ಬಸವೇಶ್–ರತ್ನಮ್ಮ ದಂಪತಿಯ ಎರಡನೇ ಮಗ ಶಿವಶಂಕರ್ (28) ಮೃತಪಟ್ಟವರು. ಅವರಿಗೆ ವಾರದ ಹಿಂದೆ ಕೋವಿಡ್ ದೃಢಪಟ್ಟಿತ್ತು. ಬಳಿಕ ಉಸಿರಾಟದ ಸಮಸ್ಯೆ ಉಂಟಾಗಿತ್ತು. ಜಿಲ್ಲಾ ಆಸ್ಪತ್ರೆಯ ಎಂಐಸಿಯುಗೆ ದಾಖಲಿಸಲಾಗಿತ್ತು. ಎಂಐಸಿಯು ಸಾಕಾಗಲ್ಲ, ಐಸಿಯು ಬೇಕಾಗುತ್ತದೆ. ಜಿಲ್ಲಾ ಆಸ್ಪತ್ರೆಯಲ್ಲಿ ಖಾಲಿ ಇಲ್ಲ. ಬೇರೆಡೆ ಇದೆಯೇ ಎಂದು ನೋಡುವಂತೆ ವೈದ್ಯರು ತಿಳಿಸಿದ್ದರು. ಆದರೆ ಎಲ್ಲಿಯೂ ಐಸಿಯು ಖಾಲಿ ಇಲ್ಲದೇ ಮೃತಪಟ್ಟಿದ್ದಾರೆ ಎಂದು ಶಿವಶಂಕರ್ ಅವರ ಸ್ನೇಹಿತ ಪ್ರವೀಣ್ ತಿಳಿಸಿದ್ದಾರೆ.