‘ಕೊಳೆಗೇರಿಯಲ್ಲಿ ಮನೆ ನಿರ್ಮಾಣಕ್ಕೆ ಎಕ್ಸಿಕ್ಯುಟಿವ್ ಎಂಜಿನಿಯರ್ ಅವರೇ ತಕರಾರು ತೆಗೆಯುತ್ತಾರೆ’ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದಾಗ, ಇಇ ಕಬಿನಿ ಗೌಡ ಅವರನ್ನು ಸಚಿವರು ಎದುರಿಗೆ ಕರೆಸಿಕೊಂಡರು. ‘ಮೈಸೂರಿಂದ ಇಲ್ಲಿಗೆ ವರ್ಗಾವಣೆ ಮಾಡಿದ್ರೂ ನಿಮ್ಮ ಹೊಟ್ಟೆ ಇಳಿದಿಲ್ಲ. ಇವರು ಮತ್ತು ಪದ್ಮನಾಭ ಎಂಬಿಬ್ಬರು ಅಧಿಕಾರಿಗಳೇ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ದೊಡ್ಡ ತಿಮಿಂಗಿಲಗಳು’ ಎಂದು ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಂಡರು.