<p><strong>ದಾವಣಗೆರೆ:</strong> ರಾಘವೇಂದ್ರ ಸ್ವಾಮೀಜಿ ಅವರು ಸರ್ವಕಾಲಕ್ಕೂ ಪವಾಡ ಪುರಷ. ಅವರು ರಚಿಸಿದ 51 ಅಪೂರ್ವ ಗ್ರಂಥಗಳೇ ಇದಕ್ಕೆ ಸಾಕ್ಷಿ ಎಂದು ಫಲಿಮಾರು ಮಠದ ವಿದ್ಯಾಧೀಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>ಇಲ್ಲಿನ ಕೆ.ಬಿ. ಬಡಾವಣೆಯ ರಾಘವೇಂದ್ರ ಸ್ವಾಮಿ ಮಠದ ಸುವರ್ಣ ಮಹೋತ್ಸವದ ಅಂಗವಾಗಿ ಬುಧವಾರ ಸಂಸ್ಥಾನ ಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.</p>.<p>‘ರಾಯರ ವೃಂದಾವನ ಮಾಡಿದ ಸ್ಥಳ ಜಾತಿ ಭೇದವಿಲ್ಲದೆ ಎಲ್ಲರನ್ನು ಉದ್ಧಾರ ಮಾಡುತ್ತಿದೆ. ಅವರ ಪವಾಡಗಳು ಆ ಕಾಲಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದಾದ್ಯಂತ ಸಂಚರಿಸಿ ಪಾಠ, ಪ್ರವಚನ ಮಾಡಿದ್ದಾರೆ. ಅವರು ರಚಿಸಿದ ಗ್ರಂಥಗಳಿಂದ ಜ್ಞಾನದ ಶ್ರೀಮಂತಿಕೆ ಲಭಿಸಿದೆ’ ಎಂದು ಹೇಳಿದರು.</p>.<p>‘ರಾಯರ ಮಠವು ಲೌಕಿಕವಾಗಿ ಮಾತ್ರವಲ್ಲ, ಭಕ್ತರ ನಂಬಿಕೆಯ ದೃಷ್ಟಿಯಿಂದಲೂ ಶ್ರೀಮಂತವಾಗಿದೆ. ಮಠವು ಇನ್ನೂ ಹೆಚ್ಚಿನ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನಾಡಿನ ಸುಭೀಕ್ಷೆಗೆ ಕಾರಣವಾಗಲಿ’ ಎಂದು ಹಾರೈಸಿದರು.</p>.<p>ಪಂಡಿತ ಸುಧೀಂದ್ರ, ಸತ್ಯನಾರಾಯಣಾಚಾರ್ಯ ಉಪನ್ಯಾಸ ನೀಡಿದರು. ಕೊ.ಸಾ. ಪ್ರಸನ್ನಕುಮಾರ್, ಕಂಪ್ಲಿ ಗುರುರಾಜ ಆಚಾರ್ಯ, ಸುಬ್ರಹ್ಮಣ್ಯ, ವಾಚಸ್ಪತಿ ಆಚಾರ್, ವಾಗೀಶಾಚಾರ್, ಪ್ರಾಣೇಶಾಚಾರ್, ನರಗನಹಳ್ಳಿ ಶ್ರೀನಿವಾಸ್, ಪ್ರಹ್ಲಾದ್, ಸಿ.ಕೆ. ಆನಂದತೀರ್ಥಾಚಾರ್ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ರಾಘವೇಂದ್ರ ಸ್ವಾಮೀಜಿ ಅವರು ಸರ್ವಕಾಲಕ್ಕೂ ಪವಾಡ ಪುರಷ. ಅವರು ರಚಿಸಿದ 51 ಅಪೂರ್ವ ಗ್ರಂಥಗಳೇ ಇದಕ್ಕೆ ಸಾಕ್ಷಿ ಎಂದು ಫಲಿಮಾರು ಮಠದ ವಿದ್ಯಾಧೀಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>ಇಲ್ಲಿನ ಕೆ.ಬಿ. ಬಡಾವಣೆಯ ರಾಘವೇಂದ್ರ ಸ್ವಾಮಿ ಮಠದ ಸುವರ್ಣ ಮಹೋತ್ಸವದ ಅಂಗವಾಗಿ ಬುಧವಾರ ಸಂಸ್ಥಾನ ಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.</p>.<p>‘ರಾಯರ ವೃಂದಾವನ ಮಾಡಿದ ಸ್ಥಳ ಜಾತಿ ಭೇದವಿಲ್ಲದೆ ಎಲ್ಲರನ್ನು ಉದ್ಧಾರ ಮಾಡುತ್ತಿದೆ. ಅವರ ಪವಾಡಗಳು ಆ ಕಾಲಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದಾದ್ಯಂತ ಸಂಚರಿಸಿ ಪಾಠ, ಪ್ರವಚನ ಮಾಡಿದ್ದಾರೆ. ಅವರು ರಚಿಸಿದ ಗ್ರಂಥಗಳಿಂದ ಜ್ಞಾನದ ಶ್ರೀಮಂತಿಕೆ ಲಭಿಸಿದೆ’ ಎಂದು ಹೇಳಿದರು.</p>.<p>‘ರಾಯರ ಮಠವು ಲೌಕಿಕವಾಗಿ ಮಾತ್ರವಲ್ಲ, ಭಕ್ತರ ನಂಬಿಕೆಯ ದೃಷ್ಟಿಯಿಂದಲೂ ಶ್ರೀಮಂತವಾಗಿದೆ. ಮಠವು ಇನ್ನೂ ಹೆಚ್ಚಿನ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನಾಡಿನ ಸುಭೀಕ್ಷೆಗೆ ಕಾರಣವಾಗಲಿ’ ಎಂದು ಹಾರೈಸಿದರು.</p>.<p>ಪಂಡಿತ ಸುಧೀಂದ್ರ, ಸತ್ಯನಾರಾಯಣಾಚಾರ್ಯ ಉಪನ್ಯಾಸ ನೀಡಿದರು. ಕೊ.ಸಾ. ಪ್ರಸನ್ನಕುಮಾರ್, ಕಂಪ್ಲಿ ಗುರುರಾಜ ಆಚಾರ್ಯ, ಸುಬ್ರಹ್ಮಣ್ಯ, ವಾಚಸ್ಪತಿ ಆಚಾರ್, ವಾಗೀಶಾಚಾರ್, ಪ್ರಾಣೇಶಾಚಾರ್, ನರಗನಹಳ್ಳಿ ಶ್ರೀನಿವಾಸ್, ಪ್ರಹ್ಲಾದ್, ಸಿ.ಕೆ. ಆನಂದತೀರ್ಥಾಚಾರ್ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>