ಕಳೆದ ವರ್ಷದ ಮೆಕ್ಕೆಜೋಳದ ಹೊಲದಲ್ಲಿ ದಟ್ಟವಾಗಿ ಬೆಳೆದ ಮುಳ್ಳು ಸಜ್ಜೆ
‘ಕಳೆ ವ್ಯಾಪಕತೆಗೆ ಏಕಬೆಳೆ ಪದ್ದತಿ ಕಾರಣ’
ಮುಳ್ಳು ಸಜ್ಜೆ ಕಳೆ ವ್ಯಾಪಕತೆಗೆ ಏಕಬೆಳೆ ಪದ್ದತಿಯೇ ಕಾರಣ. ಬೆಳೆ ಪರಿವರ್ತನೆಗೆ ರೈತರು ಸಂಕಲ್ಪ ಮಾಡಬೇಕು. ನಿರ್ದಿಷ್ಟ ಕಳೆನಾಶಕ ಸಂಶೋಧನೆಯ ಹಂತದಲ್ಲಿದೆ. ಮೊದಲ 30 ದಿನಗಳಲ್ಲಿ ಕಳೆ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕು. ಕಳೆದ ವರ್ಷ ರೈತ ತಿಮ್ಮಣ್ಣ ಅವರು ಸೊಯಾಬೀನ್ ಬಿತ್ತನೆ ಮಾಡಿದ್ದರಿಂದ ಮುಳ್ಳು ಸಜ್ಜೆ ಪ್ರವೇಶ ಇರಲಿಲ್ಲ. ಮುಳ್ಳು ಸಜ್ಜೆಯಿಂದ ಇಳುವರಿ ಕುಸಿತ ನಿಶ್ಚಿತ. ಬಿ.ಯು.ಮಲ್ಲಿಕಾರ್ಜುನ್ ಬೇಸಾಯ ತಜ್ಞ ತರಳಬಾಳು ಕೃಷಿ ಸಂಶೋಧನಾ ಕೇಂದ್ರ ದಾವಣಗೆರೆ