<p>ದಾವಣಗೆರೆ: ಶಿವನಗರದಲ್ಲಿ ಹಳದಿ ನೀರು ಬಂದ ಪ್ರದೇಶಗಳಿಗೆ ಮಹಾನಗರ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನೀರನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.</p>.<p>ಶಿವನಗರದ 4ನೇ ಕ್ರಾಸ್ ಮತ್ತು ಸುತ್ತಮುತ್ತಲ ಮನೆಗಳಿಗೆ ಪೂರೈಕೆಯಾಗಿದ್ದ ನೀರು ಹಳದಿಯಾಗಿತ್ತು. ಮಳೆಗಾಲದಲ್ಲಿ ಕೆಂಪು ನೀರು ಬರುವುದು ಸಹಜ. ಹಳದಿ ನೀರು ಕಂಡು ಜನರು ಕಂಗಾಲಾಗಿದ್ದರು. ಈ ಬಗ್ಗೆ ‘ಪ್ರಜಾವಾಣಿ’ ಬೆಳಕು ಚೆಲ್ಲಿತ್ತು. ಮಂಗಳವಾರ ಈ ಬಗ್ಗೆ ವಿಶೇಷ ವರದಿ ಪ್ರಕಟವಾಗುತ್ತಿದ್ದಂತೆ ಸ್ಥಳಕ್ಕೆ ಅಧಿಕಾರಿಗಳು, ಎಂಜಿನಿಯರ್, ಸಿಬ್ಬಂದಿ ಭೇಟಿ ನೀಡಿದರು.</p>.<p>‘ಚರಂಡಿಗಳ ನಡುವೆ ಸ್ವಚ್ಛತೆ ಇಲ್ಲದ ಕಡೆಗಳಲ್ಲಿಯೂ ನಲ್ಲಿ, ಪೈಪ್ಲೈನ್ ಇರುವುದು ಕಂಡು ಬಂದಿತ್ತು. ಆದರೆ ನೀರು ಹಳದಿ ಆಗಲು ಕಾರಣ ಏನು ಎಂಬುದು ಪತ್ತೆಯಾಗಿಲ್ಲ. ಚರಂಡಿ ನೀರು, ಶೌಚಾಲಯದ ನೀರು ಇದಕ್ಕೆ ಮಿಶ್ರಣ ಆದರೆ ವಾಸನೆ ಬರುತ್ತದೆ. ಆದರೆ ಈ ನೀರು ಯಾವ ವಾಸನೆಯೂ ಇರಲಿಲ್ಲ. ಹಲವು ಕಡೆಗಳಲ್ಲಿ ಪೈಪ್ಲೈನ್ ಹೋದ ಜಾಗಗಳನ್ನು ಅಗೆದು ಪರಿಶೀಲಿಸಲಾಯಿತು. ಕೊಳಚೆಯ ಬಳಿ ಇರುವ ನಲ್ಲಿಗಳನ್ನು ಬಂದ್ ಮಾಡಿಸಲಾಯಿತು. ಇವತ್ತು ನೀರು ಹರಿಸಿ ಪರೀಕ್ಷಿಸಿದಾಗ ಹಳದಿ ಬಣ್ಣವಿಲ್ಲದ ನೀರು ಬಂದಿದೆ’ ಎಂದು ಪಾಲಿಕೆಯ ಎಇಇ ವಿನಯ್ ತಿಳಿಸಿದರು.</p>.<p>‘ಅಧಿಕಾರಿಗಳು ಬಂದು ಪರೀಕ್ಷೆ ನಡೆಸಿದರು. ಇನ್ನು ಮುಂದೆ ರಾತ್ರಿ ನೀರು ಬಿಡುವುದಿಲ್ಲ. ಹಗಲು ಹೊತ್ತಿನಲ್ಲೇ ನೀರು ಬಿಡುವುದಾಗಿ ಭರವಸೆ ನೀಡಿದರು’ ಎಂದು ಶಿವನಗರದ ಫಜ್ಲುನ್ನಿಸಾ ‘ಪ್ರಜಾವಾಣಿ’ಗೆ<br />ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಾವಣಗೆರೆ: ಶಿವನಗರದಲ್ಲಿ ಹಳದಿ ನೀರು ಬಂದ ಪ್ರದೇಶಗಳಿಗೆ ಮಹಾನಗರ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನೀರನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.</p>.<p>ಶಿವನಗರದ 4ನೇ ಕ್ರಾಸ್ ಮತ್ತು ಸುತ್ತಮುತ್ತಲ ಮನೆಗಳಿಗೆ ಪೂರೈಕೆಯಾಗಿದ್ದ ನೀರು ಹಳದಿಯಾಗಿತ್ತು. ಮಳೆಗಾಲದಲ್ಲಿ ಕೆಂಪು ನೀರು ಬರುವುದು ಸಹಜ. ಹಳದಿ ನೀರು ಕಂಡು ಜನರು ಕಂಗಾಲಾಗಿದ್ದರು. ಈ ಬಗ್ಗೆ ‘ಪ್ರಜಾವಾಣಿ’ ಬೆಳಕು ಚೆಲ್ಲಿತ್ತು. ಮಂಗಳವಾರ ಈ ಬಗ್ಗೆ ವಿಶೇಷ ವರದಿ ಪ್ರಕಟವಾಗುತ್ತಿದ್ದಂತೆ ಸ್ಥಳಕ್ಕೆ ಅಧಿಕಾರಿಗಳು, ಎಂಜಿನಿಯರ್, ಸಿಬ್ಬಂದಿ ಭೇಟಿ ನೀಡಿದರು.</p>.<p>‘ಚರಂಡಿಗಳ ನಡುವೆ ಸ್ವಚ್ಛತೆ ಇಲ್ಲದ ಕಡೆಗಳಲ್ಲಿಯೂ ನಲ್ಲಿ, ಪೈಪ್ಲೈನ್ ಇರುವುದು ಕಂಡು ಬಂದಿತ್ತು. ಆದರೆ ನೀರು ಹಳದಿ ಆಗಲು ಕಾರಣ ಏನು ಎಂಬುದು ಪತ್ತೆಯಾಗಿಲ್ಲ. ಚರಂಡಿ ನೀರು, ಶೌಚಾಲಯದ ನೀರು ಇದಕ್ಕೆ ಮಿಶ್ರಣ ಆದರೆ ವಾಸನೆ ಬರುತ್ತದೆ. ಆದರೆ ಈ ನೀರು ಯಾವ ವಾಸನೆಯೂ ಇರಲಿಲ್ಲ. ಹಲವು ಕಡೆಗಳಲ್ಲಿ ಪೈಪ್ಲೈನ್ ಹೋದ ಜಾಗಗಳನ್ನು ಅಗೆದು ಪರಿಶೀಲಿಸಲಾಯಿತು. ಕೊಳಚೆಯ ಬಳಿ ಇರುವ ನಲ್ಲಿಗಳನ್ನು ಬಂದ್ ಮಾಡಿಸಲಾಯಿತು. ಇವತ್ತು ನೀರು ಹರಿಸಿ ಪರೀಕ್ಷಿಸಿದಾಗ ಹಳದಿ ಬಣ್ಣವಿಲ್ಲದ ನೀರು ಬಂದಿದೆ’ ಎಂದು ಪಾಲಿಕೆಯ ಎಇಇ ವಿನಯ್ ತಿಳಿಸಿದರು.</p>.<p>‘ಅಧಿಕಾರಿಗಳು ಬಂದು ಪರೀಕ್ಷೆ ನಡೆಸಿದರು. ಇನ್ನು ಮುಂದೆ ರಾತ್ರಿ ನೀರು ಬಿಡುವುದಿಲ್ಲ. ಹಗಲು ಹೊತ್ತಿನಲ್ಲೇ ನೀರು ಬಿಡುವುದಾಗಿ ಭರವಸೆ ನೀಡಿದರು’ ಎಂದು ಶಿವನಗರದ ಫಜ್ಲುನ್ನಿಸಾ ‘ಪ್ರಜಾವಾಣಿ’ಗೆ<br />ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>