ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಗೆ ಮುನ್ನವೇ ಖಾಲಿಯಾದ ಗೋಕಟ್ಟೆ

Last Updated 14 ಅಕ್ಟೋಬರ್ 2012, 5:30 IST
ಅಕ್ಷರ ಗಾತ್ರ

ಮಲೇಬೆನ್ನೂರು: ಮನ್ನಾ ಜಂಗಲ್ ಪ್ರದೇಶದ ಮುದ್ದಪ್ಪನ ಕೆರೆ ಕೆಳಭಾಗದಲ್ಲಿ ಪ್ರಾಣಿ ಪಕ್ಷಿ ಸಂಕುಲದ ಕುಡಿಯುವ ನೀರಿಗೆ ನಿರ್ಮಿಸಿರುವ ಗೋಕಟ್ಟೆಗೆ ರೈತರು ಅಕ್ರಮ ಪಂಪ್‌ಸೆಟ್ ಅಳವಡಿಸಿಕೊಂಡ ಕಾರಣ ನೀರು ತಳಮಟ್ಟ ಕಂಡಿದೆ.

ಪ್ರಸಕ್ತ ವರ್ಷ ಮಳೆ ಕೈಕೊಟ್ಟಿದ್ದು ಪ್ರಾಣಿಗಳಿಗೆ ಕುಡಿಯುವ ನೀರಿನ ಆಸರೆಯಾದ ಮುದ್ದಪ್ಪನ ಕೆರೆ ಖಾಲಿ ಹೊಡೆಯುತ್ತಿವೆ.

ಕಳೆದ ವಾರ ಸುರಿದ 2 ದಿನದ ಮಳೆಗೆ ಸ್ವಲ್ಪ ನೀರು ಸಂಗ್ರಹವಾಗಿ ನೆಮ್ಮದಿ ತಂದಿತ್ತು. ಆದರೆ, ಸುತ್ತಮುತ್ತಲ ಪ್ರದೇಶದ ಮೆಕ್ಕೆಜೋಳ ಬೆಳೆದ ರೈತರು ನಾಲ್ಕಾರು ಪಂಪ್‌ಸೆಟ್ ಹಾಕಿಕೊಂಡು ನೀರು ಎತ್ತಿದ ಕಾರಣ 3 ದಿನದಲ್ಲಿ ನೀರು ಖಾಲಿಯಾಗಿದೆ ಎಂದು ಗೋಮಾಳಕ್ಕೆ ಹಸು, ಎಮ್ಮೆ ಹಾಗೂ ಕುರಿ ಕಳುಹಿಸುವವರು ಸಮಸ್ಯೆ ವರದಿ ಮಾಡುವಂತೆ ಗುರುವಾರ ಕೋರಿ ಆತಂಕ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿದ ಗೋಕಟ್ಟೆ ಒಂದು ಪಾರ್ಶ್ವದ ಕೆಳೆಗೆ ನೀರು ನಿಲ್ಲದೆ ಬಸಿದು ಹೋಗುತ್ತಿದೆ. ವಿಚಾರ ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದರೂ ಯಾವುದೆ ಪ್ರಯೋಜನ ಆಗಿಲ್ಲ. ಗೋಕಟ್ಟೆ ಸಂಪೂರ್ಣ ಖಾಲಿ ಆಗುವುದನ್ನು ತಡೆಯುವಂತೆ ಆಗ್ರಹಿಸಿದರು. 

ಗೋಕಟ್ಟೆಗೆ ನದಿನೀರು: ಗೋಕಟ್ಟೆ ಚಿತ್ರ ತೆಗೆಯುವ ವೇಳೆ ಆಗಮಿಸಿದ ಕೆಲವು ರೈತರು ವಿಚಾರಣೆ ಮಾಡಿದರು.
ಸಮೀಪದ ತುಂಗಭದ್ರಾ ನದಿಯಿಂದ ಮುದ್ದಪ್ಪನ ಕೆರೆ ಹಾಗೂ ಗೋಕಟ್ಟೆಗೆ ನೀರು ಒದಗಿಸುವ ಕುರಿತು ಯೋಜನಾ ವರದಿ ತಯಾರಿಸಲು ಮಾಡಲು ಬಂದಿರುವುದಾಗಿ ತಿಳಿಸಿದ ನಂತರ ಭಾವಚಿತ್ರ ತೆಗೆಯಲು ಅನುವು ಮಾಡಿಕೊಟ್ಟ ಘಟನೆ ನಡೆಯಿತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT