‘ಕರ್ನಾಟಕದಲ್ಲಿ ಹೊಸ ಮಾರ್ಗ ನಿರ್ಮಾಣಕ್ಕೆ ಒಟ್ಟಾರೆ ₹2,423 ಕೋಟಿ, ದ್ವಿಪಥೀಕರಣಕ್ಕೆ ₹1,529 ಕೋಟಿ ನಿಗದಿಯಾಗಿದೆ. ಮೇಲ್ಸೇತುವೆ ಹಾಗೂ ಕೆಳಸೇತುವೆ ನಿರ್ಮಾಣಕ್ಕೆ ₹242 ಕೋಟಿ, ವಿದ್ಯುದ್ದೀಕರಣಕ್ಕೆ ₹793.3 ಕೋಟಿ ನೀಡಿದೆ. ನೈರುತ್ಯ ರೈಲ್ವೆ ವ್ಯಾಪ್ತಿಯ ಅಮೃತ ಭಾರತ ಯೋಜನೆಯಡಿ 51 ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. 2,243 ಕಿ.ಮೀ ಮಾರ್ಗದಲ್ಲಿ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಕಳೆದ ವರ್ಷ ನೈರುತ್ಯ ರೈಲ್ವೆಯು ₹9,200 ಕೋಟಿ ಆದಾಯ ಗಳಿಸಿ, ಭಾರತೀಯ ರೈಲ್ವೆಯಲ್ಲೇ ನಂ.1 ಸ್ಥಾನ ಗಳಿಸಿದೆ’ ಎಂದು ತಿಳಿಸಿದರು.