ಹುಬ್ಬಳ್ಳಿ: ‘ಹೊರವಲಯದ ಗಬ್ಬೂರು ಬಳಿ 1 ಎಕರೆ 20 ಗುಂಟೆ ಜಾಗದಲ್ಲಿ ₹8 ಕೋಟಿ ಅನುದಾನದಲ್ಲಿ ನಿರ್ಮಿಸುತ್ತಿರುವ ಜಿ+1 ಮಾದರಿಯ ಸುಸಜ್ಜಿತ ಕಟ್ಟಡ ಕಾಮಗಾರಿ ಶೀಘ್ರ ಮುಕ್ತಾಯವಾಗಲಿದೆ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಇಲ್ಲಿನ ಹೊರವಲಯದ ಗಬ್ಬೂರಿನಲ್ಲಿ ನಿರ್ಮಿಸುತ್ತಿರುವ ಕಾಮಗಾರಿ ಪರಿಶೀಲಿಸಿ ಮಾತನಾಡಿ ‘ಧಾರವಾಡ ಪೂರ್ವ ಆರ್.ಟಿ.ಒ ಕಚೇರಿ ಸದ್ಯ ಬಾಡಿಗೆ ಕಟ್ಟಡ ಹೊಂದಿದ್ದು, ಶೀಘ್ರ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು’ ಎಂದು ಹೇಳಿದರು.
ಪಾಲಿಕೆ ಸದಸ್ಯ ನಿರಂಜನ ಹಿರೇಮಠ, ಮಾಜಿ ಸದಸ್ಯ ಮೋಹನ ಅಸುಂಡಿ, ಮುಖಂಡರಾದ ಭೀಮಣ್ಣ ಬಡಿಗೇರ, ಮಂಜುನಾಥ ಉಪ್ಪಾರ, ಹಜರತ್ ಮುನ್ಶಿ, ಫರ್ವೇಜ್ ಕೊಣ್ಣೂರು, ಅಜರ್ ಮನಿಯಾರ್, ಕೆ. ದಾಮೋದರ, ಅಧೀಕ್ಷಕ ಸಂಜೀವ್ ಹೊಂಡದ ಇದ್ದರು.