ಎಲ್ ಅಂಡ್ ಟಿ ಕಂಪನಿಗೆ ನೀರು ಪೂರೈಕೆಯ ಹೊಣೆಯನ್ನು ಕೊಟ್ಟಿರುವುದರ ಹಿಂದೆ, ಇಡೀ ವ್ಯವಸ್ಥೆಯನ್ನು ಖಾಸಗೀಕರಣ ಮಾಡುವ ಹುನ್ನಾರ ಅಡಗಿದೆ. ಇದರಿಂದಾಗಿ, ಮಹಾನಗರದ ಜನರು ಕುಡಿಯುವ ನೀರಿಗಾಗಿ ಹೆಣಗಾಡುವ ಸ್ಥಿತಿ ಬಂದಿದೆ. ಸಾರ್ವಜನಿಕ ನಳಗಳು ಬಂದ್ ಆಗಿ, ಬಡವರು ಪರದಾಡುತ್ತಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದರು.