‘ಕೋವಿಡ್ ಸಂದರ್ಭದಲ್ಲಿ ಮನೆ-ಮನೆ ಸಮೀಕ್ಷೆ, ವಿವಿಧೆಡೆ ಕ್ಯಾಂಪ್ ಮಾಡಿ ಜನರ ತಪಾಸಣೆ ಮಾಡಿಸುವುದು, ಕೋವಿಡ್ ಪಾಸಿಟಿವ್ ಇದ್ದವರನ್ನು ಆಸ್ಪತ್ರೆಗೆ ಕಳುಹಿಸುವುದು ಸೇರಿದಂತೆ ಲಸಿಕಾ ಕಾರ್ಯಕ್ರಮದಲ್ಲಿ ಈಗಲೂ ಕೆಲಸ ಮಾಡುತ್ತಿದ್ದೇವೆ. ಸೋಂಕು ತಗುಲುವ ಭೀತಿ ಇದ್ದರೂ ಪ್ರಾಣ ಲೆಕ್ಕಿಸದೆ ಶ್ರಮಿಸಿದ್ದೇವೆ. ಆ ಸಂದರ್ಭದಲ್ಲಿ ಗೌರವಧನವನ್ನೂ ವಿಳಂಬ ಮಾಡಲಾಗುತ್ತಿತ್ತು’ ಎಂದು ನವಲಗುಂದ ತಾಲ್ಲೂಕು ಘಟಕದ ಸಿಐಟಿಯು ಅಧ್ಯಕ್ಷೆ, ಅಂಗನವಾಡಿ ಕಾರ್ಯಕರ್ತೆ ಬಸವ್ವ ನಾಗಪ್ಪ ಕಳಸದ ದೂರಿದರು.