<p><strong>ಹುಬ್ಬಳ್ಳಿ: </strong>ಕೋವಿಡ್ ನಿಯಂತ್ರಣಕ್ಕಾಗಿ ಶ್ರಮಿಸಿದ ಆಶಾ ಕಾರ್ಯಕರ್ತೆಯರಿಗೆ ಕೋವಿಡ್ ಅಪಾಯ ಭತ್ಯೆ ನೀಡುತ್ತಿರುವ ಸರ್ಕಾರ, ಅಂಗನವಾಡಿ ಕಾರ್ಯಕರ್ತೆಯರನ್ನು ಕಡೆಗಣಿಸಿದೆ ಎಂಬ ಆರೋಪ ಕೇಳಿಬಂದಿದೆ.</p>.<p>ಕೋವಿಡ್ ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರೊಂದಿಗೆ ಅಂಗನವಾಡಿ ಕಾರ್ಯಕರ್ತೆಯರು ಸಹ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಕೋವಿಡ್ ಆರಂಭದಿಂದಲೂ ಆಶಾ ಕಾರ್ಯಕರ್ತೆಯರಿಗೆ ಅಪಾಯ ಭತ್ಯೆಯಾಗಿ ಮಾಸಿಕ ₹1,000 ನೀಡಲಾಗುತ್ತಿದೆ. ಆದರೆ, ಈವರೆಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಭತ್ಯೆ ನೀಡಿಲ್ಲ.</p>.<p>‘ಕೋವಿಡ್ ಸಂದರ್ಭದಲ್ಲಿ ಮನೆ-ಮನೆ ಸಮೀಕ್ಷೆ, ವಿವಿಧೆಡೆ ಕ್ಯಾಂಪ್ ಮಾಡಿ ಜನರ ತಪಾಸಣೆ ಮಾಡಿಸುವುದು, ಕೋವಿಡ್ ಪಾಸಿಟಿವ್ ಇದ್ದವರನ್ನು ಆಸ್ಪತ್ರೆಗೆ ಕಳುಹಿಸುವುದು ಸೇರಿದಂತೆ ಲಸಿಕಾ ಕಾರ್ಯಕ್ರಮದಲ್ಲಿ ಈಗಲೂ ಕೆಲಸ ಮಾಡುತ್ತಿದ್ದೇವೆ. ಸೋಂಕು ತಗುಲುವ ಭೀತಿ ಇದ್ದರೂ ಪ್ರಾಣ ಲೆಕ್ಕಿಸದೆ ಶ್ರಮಿಸಿದ್ದೇವೆ. ಆ ಸಂದರ್ಭದಲ್ಲಿ ಗೌರವಧನವನ್ನೂ ವಿಳಂಬ ಮಾಡಲಾಗುತ್ತಿತ್ತು’ ಎಂದು ನವಲಗುಂದ ತಾಲ್ಲೂಕು ಘಟಕದ ಸಿಐಟಿಯು ಅಧ್ಯಕ್ಷೆ, ಅಂಗನವಾಡಿ ಕಾರ್ಯಕರ್ತೆ ಬಸವ್ವ ನಾಗಪ್ಪ ಕಳಸದ ದೂರಿದರು.</p>.<p>‘ಆಶಾ ಕಾರ್ಯಕರ್ತೆಯರಂತೆ ನಮಗೂ ಕೋವಿಡ್ ಅಪಾಯ ಭತ್ಯೆ ಸಿಗುವುದೆಂಬ ನಿರೀಕ್ಷೆಯಲ್ಲಿದ್ದೆವು. ಈವರೆಗೆ ಭತ್ಯೆ ಸಿಕ್ಕಿಲ್ಲ. ಕೋವಿಡ್ ಪರಿಹಾರವಾಗಿ ಒಂದು ಬಾರಿಗೆ ₹2,000 ನೀಡಿದ್ದು ಬಿಟ್ಟರೆ, ಬೇರಾವ ನೆರವು ದೊರೆತಿಲ್ಲ. ಜೀವನ ನಿರ್ವಹಣೆಗೆ ಸದ್ಯ ನೀಡುತ್ತಿರುವ ಗೌರವಧನವೂ ಸಾಲುವುದಿಲ್ಲ. ನಮ್ಮ ಕೆಲಸ ಪರಿಗಣಿಸಿ ಈವರೆಗಿನ ಒಟ್ಟು ಭತ್ಯೆಯನ್ನು ಇನ್ನಾದರೂ ನೀಡಿದರೆ ಅನುಕೂಲವಾಗುತ್ತದೆ’ ಎಂದು ಮನವಿ ಮಾಡಿದರು.</p>.<p>‘ಪ್ರತಿ ತಿಂಗಳು ₹5,000 ಗೌರವಧನ ಸಿಗುತ್ತಿದೆ. ಒಂದು ಬಾರಿ ಪರಿಹಾರವಾಗಿ ಅಂಗನವಾಡಿ ಸಹಾಯಕಿಯರಿಗೆ ₹1,000 ಮಾತ್ರ ನೀಡಿದ್ದಾರೆ. ಅಂಗನವಾಡಿ ಆರಂಭವಾಗಿದ್ದು, ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದೇವೆ. ಕೋವಿಡ್ ಭತ್ಯೆ ನೀಡಿದರೆ ಜೀವನ ನಿರ್ವಹಣೆಗೆ ಸಹಾಯಕವಾಗುತ್ತದೆ’ ಎಂದು ಅಂಗನವಾಡಿ ಸಹಾಯಕಿಯೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಕೋವಿಡ್ ನಿಯಂತ್ರಣಕ್ಕಾಗಿ ಶ್ರಮಿಸಿದ ಆಶಾ ಕಾರ್ಯಕರ್ತೆಯರಿಗೆ ಕೋವಿಡ್ ಅಪಾಯ ಭತ್ಯೆ ನೀಡುತ್ತಿರುವ ಸರ್ಕಾರ, ಅಂಗನವಾಡಿ ಕಾರ್ಯಕರ್ತೆಯರನ್ನು ಕಡೆಗಣಿಸಿದೆ ಎಂಬ ಆರೋಪ ಕೇಳಿಬಂದಿದೆ.</p>.<p>ಕೋವಿಡ್ ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರೊಂದಿಗೆ ಅಂಗನವಾಡಿ ಕಾರ್ಯಕರ್ತೆಯರು ಸಹ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಕೋವಿಡ್ ಆರಂಭದಿಂದಲೂ ಆಶಾ ಕಾರ್ಯಕರ್ತೆಯರಿಗೆ ಅಪಾಯ ಭತ್ಯೆಯಾಗಿ ಮಾಸಿಕ ₹1,000 ನೀಡಲಾಗುತ್ತಿದೆ. ಆದರೆ, ಈವರೆಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಭತ್ಯೆ ನೀಡಿಲ್ಲ.</p>.<p>‘ಕೋವಿಡ್ ಸಂದರ್ಭದಲ್ಲಿ ಮನೆ-ಮನೆ ಸಮೀಕ್ಷೆ, ವಿವಿಧೆಡೆ ಕ್ಯಾಂಪ್ ಮಾಡಿ ಜನರ ತಪಾಸಣೆ ಮಾಡಿಸುವುದು, ಕೋವಿಡ್ ಪಾಸಿಟಿವ್ ಇದ್ದವರನ್ನು ಆಸ್ಪತ್ರೆಗೆ ಕಳುಹಿಸುವುದು ಸೇರಿದಂತೆ ಲಸಿಕಾ ಕಾರ್ಯಕ್ರಮದಲ್ಲಿ ಈಗಲೂ ಕೆಲಸ ಮಾಡುತ್ತಿದ್ದೇವೆ. ಸೋಂಕು ತಗುಲುವ ಭೀತಿ ಇದ್ದರೂ ಪ್ರಾಣ ಲೆಕ್ಕಿಸದೆ ಶ್ರಮಿಸಿದ್ದೇವೆ. ಆ ಸಂದರ್ಭದಲ್ಲಿ ಗೌರವಧನವನ್ನೂ ವಿಳಂಬ ಮಾಡಲಾಗುತ್ತಿತ್ತು’ ಎಂದು ನವಲಗುಂದ ತಾಲ್ಲೂಕು ಘಟಕದ ಸಿಐಟಿಯು ಅಧ್ಯಕ್ಷೆ, ಅಂಗನವಾಡಿ ಕಾರ್ಯಕರ್ತೆ ಬಸವ್ವ ನಾಗಪ್ಪ ಕಳಸದ ದೂರಿದರು.</p>.<p>‘ಆಶಾ ಕಾರ್ಯಕರ್ತೆಯರಂತೆ ನಮಗೂ ಕೋವಿಡ್ ಅಪಾಯ ಭತ್ಯೆ ಸಿಗುವುದೆಂಬ ನಿರೀಕ್ಷೆಯಲ್ಲಿದ್ದೆವು. ಈವರೆಗೆ ಭತ್ಯೆ ಸಿಕ್ಕಿಲ್ಲ. ಕೋವಿಡ್ ಪರಿಹಾರವಾಗಿ ಒಂದು ಬಾರಿಗೆ ₹2,000 ನೀಡಿದ್ದು ಬಿಟ್ಟರೆ, ಬೇರಾವ ನೆರವು ದೊರೆತಿಲ್ಲ. ಜೀವನ ನಿರ್ವಹಣೆಗೆ ಸದ್ಯ ನೀಡುತ್ತಿರುವ ಗೌರವಧನವೂ ಸಾಲುವುದಿಲ್ಲ. ನಮ್ಮ ಕೆಲಸ ಪರಿಗಣಿಸಿ ಈವರೆಗಿನ ಒಟ್ಟು ಭತ್ಯೆಯನ್ನು ಇನ್ನಾದರೂ ನೀಡಿದರೆ ಅನುಕೂಲವಾಗುತ್ತದೆ’ ಎಂದು ಮನವಿ ಮಾಡಿದರು.</p>.<p>‘ಪ್ರತಿ ತಿಂಗಳು ₹5,000 ಗೌರವಧನ ಸಿಗುತ್ತಿದೆ. ಒಂದು ಬಾರಿ ಪರಿಹಾರವಾಗಿ ಅಂಗನವಾಡಿ ಸಹಾಯಕಿಯರಿಗೆ ₹1,000 ಮಾತ್ರ ನೀಡಿದ್ದಾರೆ. ಅಂಗನವಾಡಿ ಆರಂಭವಾಗಿದ್ದು, ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದೇವೆ. ಕೋವಿಡ್ ಭತ್ಯೆ ನೀಡಿದರೆ ಜೀವನ ನಿರ್ವಹಣೆಗೆ ಸಹಾಯಕವಾಗುತ್ತದೆ’ ಎಂದು ಅಂಗನವಾಡಿ ಸಹಾಯಕಿಯೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>