ಕೆಲವೆಡೆ ಗಣಹೋಮ ಹಾಗೂ ಸಂಕಷ್ಟಿ ಪೂಜೆ ನಡೆಯಿತು. ಭಕ್ತರು ಬೆಳಿಗ್ಗೆಯಿಂದಲೇ ದೇವಸ್ಥಾನಗಳ ಎದುರು ಸಾಲುಗಟ್ಟಿ ನಿಂತು ವಿಘ್ನ ನಿವಾರಕನ ದರ್ಶನ ಪಡೆದು ಪುನೀತರಾದರು. ಅಕ್ಕಿಹೊಂಡದ ಗಜಾನನ ಮಂದಿರದಲ್ಲಿರುವ ಗಣೇಶ ಮೂರ್ತಿಗೆ ಮುತ್ತುಗಳಿಂದ ಅಲಂಕಾರ ಮಾಡಲಾಗಿತ್ತು. ಬಮ್ಮಾಪುರ ಓಣಿಯ ಮಹಾಗಣಪತಿ ದೇವಸ್ಥಾನ, ದಾಜಿಬಾನಪೇಟೆ ಸೇರಿದಂತೆ ನಗರದ ವಿವಿಧೆಡೆ ಇರುವ ಗಣೇಶ ಗುಡಿಗಳಲ್ಲಿ ವಿಶೇಷ ಪೂಜೆಗಳು ನಡೆದವು.