ಯಾತ್ರೆಗೆ ಹೋಗುವ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಭಕ್ತರಿಗೆ ಅನುಕೂಲವಾಗುವಂತೆ ವಾರಕ್ಕೊಮ್ಮೆ ಸಂಚರಿಸುವ ಹುಬ್ಬಳ್ಳಿ–ಕೊಚುವೇಲಿ ಮತ್ತು ಕೊಚುವೇಲಿ–ಹುಬ್ಬಳ್ಳಿ ರೈಲನ್ನು ಕನ್ಯಾಕುಮಾರಿವರೆಗೆ ವಿಸ್ತರಿಸಿ ನಿತ್ಯ ಸಂಚರಿಸಬೇಕು. ಜೊತೆಗೆ ಸೊಲ್ಲಾಪುರ, ಮೀರಜ್, ಶಿವಮೊಗ್ಗ, ಬೀದರ್ನಿಂದ ಕನ್ಯಾಕುಮಾರಿವರೆಗೆ (ಕೇರಳದ ಕೋಟಾಯಂ, ಚೆಂಗನೂರು ಮಾರ್ಗವಾಗಿ) ರೈಲುಗಳನ್ನು ಆರಂಭಿಸಬೇಕು. ಇದರಿಂದ ಕಲಬುರ್ಗಿ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಯ ಭಕ್ತರಿಗೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು.