ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊರವಿ, ಅಂಕಲಿಕರ್‌ಗೆ ಉಸ್ತಾದ್ ಬಾಲೇಖಾನ್ ಸಂಸ್ಮರಣಾ ಪ್ರಶಸ್ತಿ

Last Updated 26 ಮೇ 2022, 17:35 IST
ಅಕ್ಷರ ಗಾತ್ರ

ಧಾರವಾಡ: ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಅವರ ನೆನಪಿನಲ್ಲಿ ನೀಡಲಾಗುವ 2020 ಹಾಗೂ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿಯು ಕ್ರಮವಾಗಿ ಹಿರಿಯ ಹಿಂದೂಸ್ತಾನಿ ಗಾಯಕ ಪಂ. ವಿನಾಯಕ ತೊರವಿ ಹಾಗೂ ವಿದುಷಿ ಆರತಿ ಅಂಕಲಿಕರ್ ಅವರಿಗೆ ಲಭಿಸಿದೆ.

ಇನ್ಫೊಸಿಸ್ ಸಿತಾರ್‌ ನವಾಜ್‌ ಉಸ್ತಾದ್‌ ಬಾಲೇಖಾನ್‌ ಹೆಸರಿನ ಪ್ರಶಸ್ತಿಯು ತಲಾ ₹1ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿವೆ.

ಇದೇ ಕಾರ್ಯಕ್ರಮದಲ್ಲಿಉಸ್ತಾದ್‌ ಬಾಲೇಖಾನ್‌ ಟ್ರಸ್ಟ್‌ ನೀಡುವ ಸಹ ಕಲಾವಿದರ ಪ್ರಶಸ್ತಿಯು 2020ನೇ ಸಾಲಿನಲ್ಲಿ ತಬಲಾ ವಾದಕ ಪಂ.ರಾಜೇಂದ್ರ ನಾಕೋಡ್ ಹಾಗೂ 2021ನೇ ಸಾಲಿನಲ್ಲಿ ಹಾರ್ಮೊನಿಯಂ ಕಲಾವಿದ ವ್ಯಾಸಮೂರ್ತಿ ಕಟ್ಟಿ ಅವರಿಗೆ ನೀಡಲಾಗುವುದು. ಜೀವಮಾನ ಸಾಧನೆ ಪ್ರಶಸ್ತಿಯನ್ನು ಮಿರಜ್‌ನ ಸಿತಾರ್‌ ತಯಾರಕ ಹಾಜಿ ಅಹ್ಮದ್‌ ಸೊಅಬಾಸೊ ಅವರಿಗೆ ನೀಡಲಾಗುತ್ತಿದ್ದು, ಮೂರೂ ಪ್ರಶಸ್ತಿಗಳು ತಲಾ ₹25ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿವೆ.

ಇದೇ 29ರಂದು ಸೃಜನಾ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಳಿಗ್ಗೆ 9ರಿಂದ ಸಂಜೆ 9ರವರೆಗೆ ಸಂಗೀತ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಹಫೀಸ್ ಬಾಲೇಖಾನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT