ಹುಬ್ಬಳ್ಳಿ: ಸಿಎಎ, ಎನ್ಆರ್ಸಿ ಜಾರಿಗೂ ಮುನ್ನಾ ಕೇಂದ್ರ ಸರ್ಕಾರ ಎಲ್ಲರ ವಿಶ್ವಾಸ ಪಡೆದುಕೊಂಡಿದ್ದರೇ ದೇಶದಾದ್ಯಂತ ಇಷ್ಟೊಂದು ದೊಡ್ಡಮಟ್ಟದಲ್ಲಿ ವಿರೋಧ, ಪ್ರತಿಭಟನೆ ನಡೆಯುತ್ತಿರಲಿಲ್ಲ. ದೇಶದಲ್ಲಿ ಅರಾಜಕತೆ ಉಂಟಾಗುವ ಮೊದಲು ಕೇಂದ್ರ ಸರ್ಕಾರ ಮರುಪರಿಶೀಲನೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸಲಹೆ ನೀಡಿದರು.