ಬಿಷ್ಣೋಯಿ ಸಮಾಜ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಮಧ್ಯಾಹ್ನದ ನಂತರ ಸಂಜೆ ವರೆಗೆ ವಹಿವಾಟು ಬಂದ್ ಮಾಡುವುದು ಗೋವಾದಲ್ಲಿ ಸಾಮಾನ್ಯವಾಗಿತ್ತು. ಆದರೆ, ರಾಜಸ್ಥಾನದ ಉದ್ಯಮಿಗಳು ಬಂದು ನೆಲೆಯೂರಿದ ನಂತರ ಆ ಪ್ರವೃತ್ತಿ ಬದಲಾಯಿತು. ಬೆಳಿಗ್ಗೆಯಿಂದ ರಾತ್ರಿ ವರೆಗೆ ದುಡಿಯುವ ಮನೋಭಾವ ನಿಮ್ಮಲ್ಲಿದೆ. ಆಯಾ ರಾಜ್ಯದ ಸಂಸ್ಕೃತಿಗೆ ಹೊಂದಿಕೊಳ್ಳುವ ಗುಣವೂ ಇದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.