ಸರ್ಕಾರದ ವಿರುದ್ಧ ಟೀಕಿಸುವ ವಿರೋಧ ಪಕ್ಷಗಳು, ಸದನಕ್ಕೆ ಬಂದು ಚರ್ಚೆ ನಡೆಸದೆ ಪಲಾಯನ ಮಾಡುತ್ತಿವೆ. ಮುಂದಿನ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ ನ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು, ತಳಬುಡವಿಲ್ಲದ ಟೀಕೆಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರು, ತಮ್ಮ ಪಕ್ಷದ ಅಂತರಿಕ ಕಲಹವನ್ನು ಮೊದಲು ಬಗೆಹರಿಸಲಿ. ನಂತರ ಸರ್ಕಾರದ ವಿರುದ್ಧ ಟೀಕಿಸಲಿ ಎಂದು ತಿರುಗೇಟು ನೀಡಿದರು.