‘ಈ ಹಿಂದೆ ಅವಳಿ ನಗರದಲ್ಲಿ ಡಿಸಿಪಿ ಆಗಿ ಕರ್ತವ್ಯ ನಿರ್ವಹಿಸಿದ್ದರಿಂದ, ಕೆಲವಷ್ಟು ಅನುಭವಗಳಿವೆ. ಯುವ ಅಧಿಕಾರಿಗಳ ತಂಡ ನನ್ನ ಜತೆ ಇರುವುದರಿಂದ, ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸುತ್ತೇನೆ. ಮಾಧ್ಯಮಗಳಲ್ಲಿ ಬರುವ ಟೀಕೆ–ಟಿಪ್ಪಣೆಗಳು ದೀಪ ಹಚ್ಚುವಂತಿರಲಿ, ಕತ್ತಲಲ್ಲಿ ಬಾಣ ಬಿಟ್ಟಂತೆ ಇರಬಾರದು’ ಎಂದು ಅವರು ಹೇಳಿದರು.