ಹಿಂದಿನ ವರ್ಷ ವಿಪರೀತ ಮಳೆ ಸುರಿದ ಕಾರಣ ಹೂಳು ತುಂಬಿದ್ದ ನಾಲೆಗಳಿಂದ ಬಹಳಷ್ಟು ಸಮಸ್ಯೆಯಾಗಿತ್ತು. ಉಣಕಲ್ ಕೆರೆಯಿಂದ ಗಬ್ಬೂರು ಕ್ರಾಸ್ ತನಕದ ಸುಮಾರು ಎಂಟು ಕಿ.ಮೀ ವ್ಯಾಪ್ತಿಯ ಮಾರ್ಗದಲ್ಲಿ ಹರಿದಿದ್ದ ನೀರು ಅಲ್ಲಲ್ಲಿ ಮನೆಗಳಿಗೆ ನುಗ್ಗಿ ಅಪಾರ ಹಾನಿ ಮಾಡಿತ್ತು.ಲಿಂಗರಾಜ ನಗರ, ಬನಶಂಕರಿ ಬಡಾವಣೆ, ಸಿದ್ದೇಶ್ವರ ಪಾರ್ಕ್, ಎಸ್.ಎಂ. ಕೃಷ್ಣ ನಗರ, ಕರ್ಕಿಹಳ್ಳದ ಸಮೀಪದಲ್ಲಿ ವಾಸವಾಗಿರುವ ಕುಟುಂಬಗಳಿಗೂ ಸಾಕಷ್ಟ ತಂದೊಡ್ಡಿತ್ತು. ಆದ್ದರಿಂದ ಪಾಲಿಕೆ ಮಳೆಗಾಲಕ್ಕೂ ಮೊದಲೇ ಈ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿದೆ.