<p><strong>ಧಾರವಾಡ</strong>: ಮುಂಗಡ ಹಣ ಪಡೆದು, ಖರೀದಿದಾರರಿಗೆ ನಿವೇಶನ ನೀಡದ ಪ್ರಕರಣದಲ್ಲಿ ಪೃಥ್ವಿ ಬಿಲ್ಡರ್–ಡೆವಲಪರ್ಸ್ ಪಾಲುದಾರ ಶಿವನಗೌಡ ಪಾಟೀಲ ಅವರಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ.</p>.<p>ಖರೀದಿದಾರರಿಗೆ ಕೊಡಬೇಕಿದ್ದ ಬಾಕಿ ₹3.62 ಲಕ್ಷಕ್ಕೆ ವಾರ್ಷಿಕ ಶೇ 10ರಷ್ಟು ಬಡ್ಡಿ ಲೆಕ್ಕ ಹಾಕಿ ಒಟ್ಟು ಮೊತ್ತ ಪಾವತಿಸಬೇಕು. ₹ 50 ಸಾವಿರ ಪರಿಹಾರ ಹಾಗೂ ಪ್ರಕರಣದ ವೆಚ್ಚ ₹10 ಸಾವಿರ ನೀಡಬೇಕು ಎಂದು ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ಆದೇಶದಲ್ಲಿ ತಿಳಿಸಿದ್ದಾರೆ.</p>.<p><strong>ಏನಿದು ಪ್ರಕರಣ?</strong></p><p>ಪೃಥ್ವಿ ಬಿಲ್ಡರ್–ಡೆವಲಪರ್ಸ್ನ ಪಾಲುದಾರ ಶಿವನಗೌಡ ಪಾಟೀಲ ಅವರು ಧಾರವಾಡ ತಾಲ್ಲೂಕಿನ ತಡಸಿನಕೊಪ್ಪದಲ್ಲಿ ಅಭಿವೃದ್ಧಿಪಡಿಸುತ್ತಿದ್ದ ಬಡಾವಣೆಯಲ್ಲಿ ಬೆಂಗಳೂರಿನ ವಿನಯ ಪಾಟೀಲ ಮತ್ತು ಆನಂದ ಗೋನಿ ಅವರು ನಿವೇಶನ ಖರೀದಿಸಿದ್ದರು. ₹5.62 ಲಕ್ಷ ಹಣ ಪಾವತಿಸಿ ಕರಾರು ಮಾಡಿಕೊಂಡಿದ್ದರು.</p>.<p>ಬಡಾವಣೆ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸದ ಶಿವನಗೌಡ ಅವರಿಗೆ ಹಣ ವಾಪಸ್ ಕೊಡುವಂತೆ ಕೇಳಿದ್ದರು. ₹2 ಲಕ್ಷ ವಾಪಸ್ ನೀಡಿ, ಬಾಕಿ ಹಣ ನೀಡಿರಲಿಲ್ಲ. ಹಾಹಾಗಿ, ವಿನಯ ಪಾಟೀಲ ಮತ್ತು ಆನಂದ ಗೋನಿ ಅವರು 2025ರ ಸೆ.26ರಂದು ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: ಮುಂಗಡ ಹಣ ಪಡೆದು, ಖರೀದಿದಾರರಿಗೆ ನಿವೇಶನ ನೀಡದ ಪ್ರಕರಣದಲ್ಲಿ ಪೃಥ್ವಿ ಬಿಲ್ಡರ್–ಡೆವಲಪರ್ಸ್ ಪಾಲುದಾರ ಶಿವನಗೌಡ ಪಾಟೀಲ ಅವರಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ.</p>.<p>ಖರೀದಿದಾರರಿಗೆ ಕೊಡಬೇಕಿದ್ದ ಬಾಕಿ ₹3.62 ಲಕ್ಷಕ್ಕೆ ವಾರ್ಷಿಕ ಶೇ 10ರಷ್ಟು ಬಡ್ಡಿ ಲೆಕ್ಕ ಹಾಕಿ ಒಟ್ಟು ಮೊತ್ತ ಪಾವತಿಸಬೇಕು. ₹ 50 ಸಾವಿರ ಪರಿಹಾರ ಹಾಗೂ ಪ್ರಕರಣದ ವೆಚ್ಚ ₹10 ಸಾವಿರ ನೀಡಬೇಕು ಎಂದು ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ಆದೇಶದಲ್ಲಿ ತಿಳಿಸಿದ್ದಾರೆ.</p>.<p><strong>ಏನಿದು ಪ್ರಕರಣ?</strong></p><p>ಪೃಥ್ವಿ ಬಿಲ್ಡರ್–ಡೆವಲಪರ್ಸ್ನ ಪಾಲುದಾರ ಶಿವನಗೌಡ ಪಾಟೀಲ ಅವರು ಧಾರವಾಡ ತಾಲ್ಲೂಕಿನ ತಡಸಿನಕೊಪ್ಪದಲ್ಲಿ ಅಭಿವೃದ್ಧಿಪಡಿಸುತ್ತಿದ್ದ ಬಡಾವಣೆಯಲ್ಲಿ ಬೆಂಗಳೂರಿನ ವಿನಯ ಪಾಟೀಲ ಮತ್ತು ಆನಂದ ಗೋನಿ ಅವರು ನಿವೇಶನ ಖರೀದಿಸಿದ್ದರು. ₹5.62 ಲಕ್ಷ ಹಣ ಪಾವತಿಸಿ ಕರಾರು ಮಾಡಿಕೊಂಡಿದ್ದರು.</p>.<p>ಬಡಾವಣೆ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸದ ಶಿವನಗೌಡ ಅವರಿಗೆ ಹಣ ವಾಪಸ್ ಕೊಡುವಂತೆ ಕೇಳಿದ್ದರು. ₹2 ಲಕ್ಷ ವಾಪಸ್ ನೀಡಿ, ಬಾಕಿ ಹಣ ನೀಡಿರಲಿಲ್ಲ. ಹಾಹಾಗಿ, ವಿನಯ ಪಾಟೀಲ ಮತ್ತು ಆನಂದ ಗೋನಿ ಅವರು 2025ರ ಸೆ.26ರಂದು ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>