ಧಾರವಾಡದ ನವೋದಯ ನಗರದ ನಿವಾಸಿ ಜಯಕರ ಪಾಟೀಲ ಎಂಬುವವರು 2015ರಲ್ಲಿ ಹುಬ್ಬಳ್ಳಿಯ ಮ್ಯಾಕ್ಸ್ವರ್ತ್ ರಿಯಾಲಿಟಿ ಇಂಡಿಯಾ ಸಂಸ್ಥೆಯು ಕುಸುಗಲ್ ಬಳಿಯ ಗುಡ್ ಶೆಫರ್ಡ್ ಶಾಲೆಯ ಎದುರು ಅಭಿವೃದ್ಧಿಪಡಿಸುತ್ತಿದ್ದ ಬಡಾವಣೆಯಲ್ಲಿ ಮೂರು ನಿವೇಶನ ಕಾಯ್ದಿರಿಸಿದ್ದರು. ₹19.28 ಲಕ್ಷ ಮುಂಗಡ ಹಣ ಪಾವತಿಸಿದ್ದರು. ಹಣ ನೀಡಿ ಆರು ವರ್ಷ ಕಳೆದರೂ ನಿವೇಶನ ನೀಡದಿದ್ದರಿಂದ ತಾವು ಕೊಟ್ಟ ಹಣ ಮರಳಿಕೊಡುವಂತೆ ಕೇಳಿದರೂ, ನೀಡದೆ ವಂಚಿಸಿದ್ದಾರೆ ಎಂದು ಆಯೋಗಕ್ಕೆ ದೂರು ನೀಡಿದ್ದರು.