<p><strong>ಹುಬ್ಬಳ್ಳಿ:</strong> ನಗರದಲ್ಲಿ ಗಾಂಜಾ ಸೇರಿದಂತೆ ಇನ್ನಿತರ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯನ್ನು ಪೊಲೀಸರು ಮುಂದುವರೆಸಿದ್ದಾರೆ. ಗಾಂಜಾ ಮಾರಾಟದಲ್ಲಿ ತೊಡಗಿದ್ದ ಏಳು ಜನರನ್ನುಬುಧವಾರ ಬಂಧಿಸಿದ್ದಾರೆ.</p>.<p>ಕಾರವಾರ ರಸ್ತೆಯ ಚರ್ಚ್ ಹತ್ತಿರ ₹12 ಸಾವಿರ ಮೌಲ್ಯದ1,200 ಗ್ರಾಂಗಾಂಜಾ ವಶಪಡಿಸಿಕೊಂಡು, ಆಟೊಚಾಲಕವಿಜಯಪುರದ ಮೈನುದ್ದೀನ್ ಶೇಖ್ ಮತ್ತು ಹಳೇ ಹುಬ್ಬಳ್ಳಿ ಈಶ್ವರ ನಗರದ ಸಾಧಿಕ್ ನರಗುಂದ ಎಂಬುವರನ್ನು ಬಂಧಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ನಗರ ಆರ್ಥಿಕ ಅಪರಾಧ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸರು ತಿಳಿಸಿದ್ದಾರೆ.</p>.<p>ಅಶೋಕ ನಗರ ಠಾಣೆ ಪೊಲೀಸರುನೃಪತುಂಗ ಬೆಟ್ಟದ ಹತ್ತಿರ ಗಾಂಜಾ ಸಾಗಾಟ ಮಾಡುತ್ತಿದ್ದ ಐವರನ್ನು ಬಂಧಿಸಿ ₹9,500 ಮೌಲ್ಯದ 190 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬಂಧಿತರಿಂದ ₹400 ನಗದು, ದ್ವಿಚಕ್ರ ವಾಹನ ಮತ್ತು ಐದು ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ.ಪೇಂಟಿಂಗ್ ಕೆಲಸ ಮಾಡುತ್ತಿದ್ದ ಧಾರವಾಡ ಪರಶುರಾಮ್ ಬೊಳನ್ನವರ, ಬಸಯ್ಯ ಪೂಜಾರ, ಗಣೇಶ ಕಾಕಡೆ, ಭೀಮ ಜಾಡರ, ಶಿವಾನಂದ ಕಾಳೆ ಬಂಧಿತರು.</p>.<p>ಪ್ರಕರಣ ದಾಖಲು:ಸಂಚಾರ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಮಂಗಳವಾರ ಅವಳಿ ನಗರಗಳಲ್ಲಿ 506 ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು ₹2.72 ಲಕ್ಷ ದಂಡ ವಿಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ನಗರದಲ್ಲಿ ಗಾಂಜಾ ಸೇರಿದಂತೆ ಇನ್ನಿತರ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯನ್ನು ಪೊಲೀಸರು ಮುಂದುವರೆಸಿದ್ದಾರೆ. ಗಾಂಜಾ ಮಾರಾಟದಲ್ಲಿ ತೊಡಗಿದ್ದ ಏಳು ಜನರನ್ನುಬುಧವಾರ ಬಂಧಿಸಿದ್ದಾರೆ.</p>.<p>ಕಾರವಾರ ರಸ್ತೆಯ ಚರ್ಚ್ ಹತ್ತಿರ ₹12 ಸಾವಿರ ಮೌಲ್ಯದ1,200 ಗ್ರಾಂಗಾಂಜಾ ವಶಪಡಿಸಿಕೊಂಡು, ಆಟೊಚಾಲಕವಿಜಯಪುರದ ಮೈನುದ್ದೀನ್ ಶೇಖ್ ಮತ್ತು ಹಳೇ ಹುಬ್ಬಳ್ಳಿ ಈಶ್ವರ ನಗರದ ಸಾಧಿಕ್ ನರಗುಂದ ಎಂಬುವರನ್ನು ಬಂಧಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ನಗರ ಆರ್ಥಿಕ ಅಪರಾಧ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸರು ತಿಳಿಸಿದ್ದಾರೆ.</p>.<p>ಅಶೋಕ ನಗರ ಠಾಣೆ ಪೊಲೀಸರುನೃಪತುಂಗ ಬೆಟ್ಟದ ಹತ್ತಿರ ಗಾಂಜಾ ಸಾಗಾಟ ಮಾಡುತ್ತಿದ್ದ ಐವರನ್ನು ಬಂಧಿಸಿ ₹9,500 ಮೌಲ್ಯದ 190 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬಂಧಿತರಿಂದ ₹400 ನಗದು, ದ್ವಿಚಕ್ರ ವಾಹನ ಮತ್ತು ಐದು ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ.ಪೇಂಟಿಂಗ್ ಕೆಲಸ ಮಾಡುತ್ತಿದ್ದ ಧಾರವಾಡ ಪರಶುರಾಮ್ ಬೊಳನ್ನವರ, ಬಸಯ್ಯ ಪೂಜಾರ, ಗಣೇಶ ಕಾಕಡೆ, ಭೀಮ ಜಾಡರ, ಶಿವಾನಂದ ಕಾಳೆ ಬಂಧಿತರು.</p>.<p>ಪ್ರಕರಣ ದಾಖಲು:ಸಂಚಾರ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಮಂಗಳವಾರ ಅವಳಿ ನಗರಗಳಲ್ಲಿ 506 ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು ₹2.72 ಲಕ್ಷ ದಂಡ ವಿಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>