ಅಶೋಕ ನಗರ ಠಾಣೆ ಪೊಲೀಸರುನೃಪತುಂಗ ಬೆಟ್ಟದ ಹತ್ತಿರ ಗಾಂಜಾ ಸಾಗಾಟ ಮಾಡುತ್ತಿದ್ದ ಐವರನ್ನು ಬಂಧಿಸಿ ₹9,500 ಮೌಲ್ಯದ 190 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬಂಧಿತರಿಂದ ₹400 ನಗದು, ದ್ವಿಚಕ್ರ ವಾಹನ ಮತ್ತು ಐದು ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ.ಪೇಂಟಿಂಗ್ ಕೆಲಸ ಮಾಡುತ್ತಿದ್ದ ಧಾರವಾಡ ಪರಶುರಾಮ್ ಬೊಳನ್ನವರ, ಬಸಯ್ಯ ಪೂಜಾರ, ಗಣೇಶ ಕಾಕಡೆ, ಭೀಮ ಜಾಡರ, ಶಿವಾನಂದ ಕಾಳೆ ಬಂಧಿತರು.