ಬೆಳಿಗ್ಗೆಯಿಂದಲೇ ನಗರದ ಹೊಸೂರು ವೃತ್ತ, ಕೇಶ್ವಾಪುರ ಸರ್ಕಲ್, ಕೋರ್ಟ್ ಸರ್ಕಲ್, ವಿದ್ಯಾನಗರ, ಉಣಕಲ್ ಬಳಿ ತಮ್ಮ ಸಿಬ್ಬಂದಿ ಜೊತೆ ಕಾರ್ಯಾಚರಣೆ ನಡೆಸಿದರು. ಅಗತ್ಯ ಸೇವೆಗಳಿಗಾಗಿ ಓಡಾಡುತ್ತಿದ್ದ ವಾಹನಗಳನ್ನು ಮಾತ್ರ ಬಿಡುತ್ತಿದ್ದರು. ಅನಗತ್ಯವಾಗಿ ತಿರುಗಾಡುತ್ತಿದ್ದವರಿಗೆ ದಂಡ ವಿಧಿಸಿ ವಾಪಸ್ ಕಳುಹಿಸಿದರು. ಇದೇ ರೀತಿ ಇನ್ನೊಂದು ಸಲ ಓಡಾಡಿದರೆ ವಾಹನ ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿ ವಾಹನಗಳ ಚಾಲಕರಿಂದ ದಾಖಲೆ ಪಡೆದು ಪರಿಶೀಲಿಸಿದರು.